
ವಾಷಿಂಗ್ಟನ್ (ಪಿಟಿಐ): ಭಾರತ ಮಭಾರತಕ್ಕೆ ಭೇಟಿ ನೀಡಬೇಕಿದ್ದ ಅಮೆರಿಕಾ ಇಂಧನ ಸಚಿವರು ತಮ್ಮ ಪ್ರವಾಸ ರದ್ದುಪಡಿಸಿದ್ದಾರೆ.ರಾಯಭಾರಿ ದೇವಯಾನಿ ಬಂಧನ ಪ್ರಕರಣದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಉಭಯ ದೇಶಗಳ ಮಧ್ಯೆ ಆತಂಕದ ವಾತಾವರಣ ಉಂಟಾಗಿರುವ ಕಾರಣ ಇಂಧನ ಸಚಿವ ಅರ್ನೆಸ್ಟ್ ಮೊನಿಜ್ ಭಾರತ ಪ್ರವಾಸವನ್ನು ರದ್ದು ಮಾಡಿದ್ದಾರೆ ಎಂದು ಶ್ವೇತ ಭವನದ ಮೂಲಗಳು ತಿಳಿಸಿವೆ.ತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ
ಈ ಮಹತ್ವದ ಭೇಟಿಯಲ್ಲಿ ಉಭಯ ದೇಶಗಳ ನಿಯೋಗಗಳು ಭವಿಷ್ಯದಲ್ಲಿ ಇಂಧನ ಆಭಿವೃದ್ಧಿ ಕುರಿತು ಚರ್ಚೆ ನಡೆಸಲಿದ್ದವು ಮತ್ತು ಪರಸ್ಪರ ಇಂಧನ ಸಹಕಾರ ಒಪ್ಪಂದಗಳಿಗೆ ಸಹಿ ಮಾಡುವ ಸಾಧ್ಯತೆಗಳಿದ್ದವು ಎಂದು ಶ್ವೇತ ಭವನದ ವಕ್ತಾರರು ಪ್ರಕಟಿಸಿದ್ದಾರೆ.
