ಮೂಡುಬಿದಿರೆ: ಕಾಸರಗೋಡು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಜಿಲ್ಲಾ ಕಂಬಳ ಸಮಿತಿ ಅದ್ಯಕ್ಷರಾಗಿ ಕಟಪಾಡಿ ವ್ಯವಸ್ಥಾಪಕ ಎರ್ಮಾಳ್ ರೋಹಿತ್ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಿತ್ ಜೈನ್ ಆಯ್ಕೆಯಾಗಿದ್ದಾರೆ.
ಶನಿವಾರ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ ಕಂಬಳ ಸಮಿತಿ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಪಿ.ಆರ್ ಶೆಟ್ಟಿ(ಗೌರವಾಧ್ಯಕ್ಷ), ಭಾಸ್ಕರ್ ಕೋಟ್ಯಾನ್, ದೇವಿ ಪ್ರಸಾದ್ ಶೆಟ್ಟಿ ಬೆಳಪು, ಜೀವಂಧರ್ , ಗುಣಪಾಲ್ ಕಡಂಬ, ಡಾ.ಜೀವಂಧರ್ ಬಲ್ಲಾಳ್, ಕೊಳಚೂರು ಸೀತಾರಾಮ ಶೆಟ್ಟಿ, ಬಾರ್ಕೂರು ಶಾಂತರಾಮ ಶೆಟ್ಟಿ, ಅಶೋಕ್ ಕುಮಾರ್ ರೈ ಉಪ್ಪಿನಂಗಡಿ, ಸುರತ್ಕಲ್ ಗೋಪಾಲಕೃಷ್ಣ ಪ್ರಭು, ಕೊಳಚುರು ಸುಕುಮಾರ್ ಶೆಟ್ಟಿ, ಚಂದ್ರಹಾಸ ಸನಿಲ್ ,ಹರ್ಷ ಸಂಪಿಗೆತ್ತಾಯ, ( ಗೌರವ ಸಲಹೆಗಾರರು), ಹರ್ಷವರ್ಧನ್ ಪಡಿವಾಳ್( ಕೋಶಾಧಿಕಾರಿ), ರಶ್ಮಿತ್ ಶೆಟ್ಟಿ ಸಿದ್ದಕಟ್ಟೆ, ದಿನೇಶ್ ಶೆಟ್ಟಿ ಮಾಳ, ಬೆಳ್ಳಿಪಾಡಿ ಕೇಶವ ಭಂಡಾರಿ, ಚಂದ್ರಹಾಸ ಶೆಟ್ಟಿ ಪುತ್ತೂರು, ಉದಯ ಕೋಟ್ಯಾನ್, ಕೊಳಕೆ ಇರ್ವತ್ತೂರು ಆನಂದ್, ರಂಜಿತ್ ಕೆ.ಪೂಜಾರಿ, ಅನಿಲ್ ಶೆಟ್ಟಿ ಜಪ್ಪಿನಮೊಗರು, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಡಾಲ್ಪಿ ಡಿಸೋಜ(ಉಪಾಧ್ಯಕ್ಷ), ಸುದೇಶ್ ಕುಮಾರ್ ಅರಿಗ ಸಿದ್ದಕಟ್ಟೆ , ಸಂದೀಪ್ ಶೆಟ್ಟಿ, ಯತೀಶ್ ಭಂಡಾರಿ, ಧನಂಜಯ ಶೆಟ್ಟಿ ಸರಪಾಡಿ( ಜೊತೆ ಕಾರ್ಯದರ್ಶಿ), ಸುರೇಶ್ ಕೆ.ಪೂಜಾರಿ (ತೀರ್ಪುಗಾರರ ಸಂಚಾಲಕ), ಧನಂಜಯ್ ಶೆಟ್ಟಿ ಇರುವೈಲ್ ದೊಡ್ಡಗುತ್ತು( ಕಾನೂನು ಸಲಹೆಗಾರರು) ಆಯ್ಕೆಯಾಗಿದ್ದಾರೆ.
