ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಕರೆ, ನಡುಗುಡ್ಡೆ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಕಂಡು ಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬಡಕರೆ ಶ್ರೀ ಕರ್ದಬ್ಬು ದೈವಸ್ಥಾನದ ಬಳಿಯ ಮನೆಯೊಂದರ ಬೆಕ್ಕು ಹಾಗೂ ಮತ್ತೊಂದು ಮನೆಯ ನಾಯಿ ನಾಪತ್ತೆಯಾಗಿದ್ದು, ಪ್ರದೇಶದಲ್ಲಿ ಚಿರತೆ ಹೆಜ್ಜೆ ಗುರುತು ಕಂಡು ಬಂದಿದೆ. ಈ ಬಗ್ಗೆ ಸ್ಥಳೀಯರು ನೀಡಿರುವ ದೂರಿನನ್ವಯ ಅರಣ್ಯ ಇಲಾಖಾಧಿಕಾರಿಗಳ ಗಮನಸೆಳೆದು ಕಾರ್ಯಾಚರಣೆ ನಡೆಸಲು ಕೇಳಿಕೊಳ್ಳುವೆ ಎಂದು ಅಡಪ ಭರವಸೆ ನೀಡಿದ್ದಾರೆ.
ಹತ್ತಿರದ ಗುಡ್ಡಪ್ರದೇಶದಲ್ಲಿ ಚಿರತೆ ಕಂಡು ಬಂದಿತ್ತಾದರೂ, ಇಲ್ಲಿ ಹಲವರು ರಾತ್ರಿ ವೇಳೆ ಎಚ್ಚರದಿಂದ ಇದ್ದರೂ ಇದುವರೆಗೆ ಯಾರೊಬ್ಬರ ಕಣ್ಣಿಗೂ ಬಿದ್ದಿಲ್ಲ.
