ವಿಟ್ಲ: ಬಾಲಗೋಕುಲ  ಕ್ಷೇತ್ರ  ವಿಟ್ಲ  ಇದರ  ವತಿಯಿಂದ  ಸಾಂಕೇತಿಕವಾಗಿ  ಶ್ರೀಕೃಷ್ಣ  ಜನ್ಮಾಷ್ಟಮಿಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಆಚರಿಸಲಾಯಿತು.  ಬಾಲಗೋಕುಲದ  ಗೌರವಾಧ್ಯಕ್ಷರಾದ  ಕೃಷ್ಣಯ್ಯ  ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. SHV_3668ಸಮಿತಿ  ಅಧ್ಯಕ್ಷ  ಹರೀಶ್  ಧ್ವಜಾರೋಹಣ  ಮಾಡಿದರು. ಸಂದರ್ಭದಲ್ಲಿ  ಮಕ್ಕಳ  ಭಜನಕಾರ್ಯಕ್ರಮ  ನಡೆಯೀತು.  ನಂತರ  ಶ್ರೀಕೃಷ್ಣ  ವೇಷದಾರಿ  ಮಕ್ಕಳಿಗೆ  ಆರತಿ ಬೆಳಗಿ  ಬೆಣ್ಣೆಯನ್ನು  ತಿನ್ನಿಸುವ  ಮೂಲಕ    ಕಾರ್ಯಕ್ರಮ  ಸಂಪನ್ನವಾಯೀತು.  ಈ  ಕಾರ್ಯಕ್ರಮವನ್ನು  ಪರಮೇಶ್ವರ  ಮಂಕುಡೆ  ನಿರೂಪಿಸಿದರು.SHV_3676ಕಾರ್ಯದರ್ಶಿ  ಯಾದ  ವಿನಯ್  ಅಲಂಗಾರ್, ರಾಜೇಶ  ಬೊಬ್ಬೆಕ್ಕೇರಿ, ರಾಜೇಶ್ ಆರ್ ಕೆ ಆರ್ಟ್ಸ್,  ಜಗದೀಶ್  ಪಣೆಮಜಲು, ಜಗನ್ನಾಥ ಕಾಸರಗೋಡು, ಜತ್ತಪ್ಪ ಗೌಡ,  ಪದ್ಮನಾಭ  ಕಟ್ಟೆ ಗೋವರ್ಧನ ಇಡ್ಯಾಳ ಹಾಗೂ ಉಳಿದ    ಬಾಲಗೋಕುಲ  ಗ್ರಾಮ  ಸಮಿತಿಯ  ಪ್ರಮುಖರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *