ಮಂಗಳೂರು: ನಗರದ ಪ್ರಸಿದ್ಧ ಸ್ವರ್ಣೋದ್ಯಮ ವ್ಯಾಪಾರಿ, ಕೊಡುಗೈದಾನಿ, ದೈವಭಕ್ತ ಸತೀಶ್ ಎನ್.ಶೇಟ್ (55.) ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗೃಹ ಅಳಕೆ ವಾದಿರಾಜ ನಗರದ ನಿವಾಸದಲ್ಲಿ ನಿಧನಹೊಂದಿರುವರು.
ಶುಭಂ ಗೋಲ್ಡ್ ಫ್ರಾಂಚೈಸಿ ಹಾಗೂ ಮನ್ವಿತ್ ಜ್ಯುವೆಲ್ಲರ್ಸ್ನ ಮಾಲಿಕರಾಗಿದ್ದ ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
