ಬಂಟ್ವಾಳ : ಪೇಟೆ ನಂದನಹಿತ್ತಿಲು ಕಾರಣಿಕ ಪ್ರಸಿದ್ಧ ದೈವಸ್ಥಾನದಲ್ಲಿ ಶ್ರೀ ವೈದ್ಯನಾಥ ಅರಸು ದೈವಕ್ಕೆ ವಾರ್ಷಿಕ ನೇಮೋತ್ಸವ ನಡೆಯಿತು. ಇಲ್ಲಿನ ಬಂಟ್ವಾಳ ಪೇಟೆಯಲ್ಲಿರುವ ಕಾರಣಿಕ ಪ್ರಸಿದ್ದ ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಮೂರು ದಿನಗಳ ವಾರ್ಷಿಕ ನೇಮೋತ್ಸವ ಶನಿವಾರ ಸಮಾಪನಗೊಂಡಿತು.
ಇದೇ ವೇಳೆ ಗಣಹೋಮ, ನಾಗತಂಬಿಲ, ನವಕ ಕಲಶಾಭಿಷೇಕ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಭಕ್ತರು ಪಾಲ್ಗೊಂಡರು. ಪ್ರಮುಖರಾದ ಗಣೇಶ್ ಸುವರ್ಣ ತುಂಬೆ, ವಿಶ್ವನಾಥ ಪೊನ್ನಂಗಿಲ ಗುತ್ತು, ಲೋಕೇಶ್ ಬಂಗೇರ, ಲೋಕನಾಥ್ ಬಡಕೊಟ್ಟು ಮತ್ತಿತರರು ಇದ್ದರು.

