ಕಾರ್ಕಳ :ಕಾರ್ಕಳದ ವಿಜಯವಾಣಿ ವರದಿಗಾರ, ಪತ್ರಕರ್ತರ ಸಂಘದ ಅಧ್ಯಕ್ಷ ಆರ್. ಬಿ ಜಗದೀಶ್, ಯುವ ರಂಗಕರ್ಮಿ ಸ್ವಸ್ತಿಕ್ ಪ್ರೊಡಕ್ಷನ್ ನ ಸುರೇಂದ್ರ ಮೋಹನ್ ಮುದ್ರಾಡಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗೊರೂರು ಘಟಕದ ಸಂಚಾಲಕಿ ರೇಷ್ಮಾ ಶೆಟ್ಟಿ ಗೊರೂರು, ಬಾಲ ಕಲಾವಿದೆ ನ್ಯಾಷನಲ್ ಟ್ಯಾಲೆಂಟೆಡ್ ಡ್ಯಾನ್ಸರ್ ಗೌರವಕ್ಕೆ ಪಾತ್ರವಾಗಿರುವ ಶೃಜನ್ಯ. ಜೆ. ಕೋಟ್ಯಾನ್ ಸಹಿತ ಸಾಧಕರಿಗೆ ಭಾನುವಾರ ಮಂಗಳೂರಿನಲ್ಲಿ ರಾಜ್ಯ ಮಟ್ಟದ “ಚೈತನ್ಯ ಶ್ರೀ “ಪ್ರಶಸ್ತಿ ಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರದಾನಿಸುವರು.123

ಕಥಾಬಂಧು ಪ್ರಕಾಶನ, ದ. ಕ. ಜಿಲ್ಲಾ ಸಾಹಿತ್ಯ ಪರಿಷತ್ತು ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿರುವ ಸಾಹಿತ್ಯೋತ್ಸವದಲ್ಲಿ ಈ ಗೌರವ ನೀಡಲಾಗುತ್ತದೆ.JOin

ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಆಡಿಯೋ ಬುಕ್ ಬಿಡುಗಡೆ, ಪ್ರತಿಭಾ ಪ್ರದರ್ಶನ, ನೃತ್ಯ ಸಹಿತ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಘಟಕ ವಿ. ವಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *