ಬಂಟ್ವಾಳ:ಬಡಗಬೆಳ್ಳೂರು ಗ್ರಾಮದ ಬಾಳಿಕೆ ಎಂಬಲ್ಲಿ 10 ಲಕ್ಷ ರೂ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆಯ ಉದ್ಘಟನೆಯನ್ನುಗ್ರಾಮ ಪಂಚಾಯತ್ ನ ನೀರು ಸರಬರಾಜು ನೌಕರರಾದ ಸೋಮಯ ಎಂಬವರ ದಿವ್ಯ ಹಸ್ತದಿಂದ ನೆರವೇರಿಸಿದ ಬಂಟ್ವಾಳ ಶಾಸಕರು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.
ಶಾಸಕ ರಾಜೇಶ್ ನಾಯಕ್ ಅವರ ಉಪಸ್ಥಿತಿಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ,ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ತಾಲೂಕು ಪಂಚಾಯತ್ ಸದಸ್ಯ ಯಶವಂತ್ ಪೊಳಲಿ ,ಬಡಗಬೆಳ್ಳೂರು ಸಹಕಾರಿ ಬ್ಯಾಂಕ್ ಅಧ್ಯಕ್ಷ ನಂದರಾಮ್ ರೈ ಮತ್ತು ಭಾರತೀಯ ಜನತಾ ಪಾರ್ಟಿ ಪ್ರಮುಖರಾದ ಪ್ರಕಾಶ್ ಬೆಳ್ಳೂರು, ರಮೇಶ್ ಬಟ್ಟಜೆ,ಮೋಹನ್ ದಾಸ್ ಕೊಟ್ಟಾರಿ,ಕಾರ್ತಿಕ್ ಬಲ್ಲಾಳ್ ,ಸುಧೀರ್ ತಾರಿಗುಡ್ಡೆ,ಅಶ್ವಥ್ ರಾವ್ ಬಾಳಿಕೆ,ಸಿತೇಶ್ ಅಂಚನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ರಸ್ತೆಗೆ ಅನುದಾನ ನೀಡಿದ ಶಾಸಕರನ್ನು ಗ್ರಾಮಸ್ಥರು ಅಭಿನಂದಿಸಿದರು.
