ಕಲ್ಲಡ್ಕ:ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕಇದರಆಶ್ರಯದಲ್ಲಿಪ್ರಸಾದ್ ನೇತ್ರಾಲಯ ಮಂಗಳೂರು ಇವರು ಕಳೆದ ಜನವರಿ ತಿಂಗಳಿನಲ್ಲಿ ಉಚಿತ ನೇತ್ರತಪಾಸಣಾ ಶಿಬಿರ ಹಾಗೂ ಉಚಿತಕನ್ನಡಕವಿತರಣಾಕಾರ್ಯಕ್ರಮವನ್ನುಆಯೋಜಿಸಿದ್ದರು.ನೇತ್ರತಪಾಸಣಾ ಸಂದರ್ಭದಲ್ಲಿಕನ್ನಡಕದಅವಶ್ಯಕತೆಯನ್ನು ತಿಳಿಸಿರುವ ವ್ಯಕ್ತಿಗಳಿಗೆ ಅ.22ರಂದು ಉಚಿತವಾಗಿ ಕನ್ನಡಕವನ್ನು ವಿತರಿಸಲಾಗುವುದು.
ಈ ಕಾರ್ಯಕ್ರಮವು ಶ್ರೀರಾಮ ಪ್ರಾಥಮಿಕ ಶಾಲಾ ವಿಭಾಗದ ವೇದವ್ಯಾಸಧ್ಯಾನ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿಪ್ರಸಾದ್ ನೇತ್ರಾಲಯಮಂಗಳೂರು ಇದರ ಸಂಸ್ಥಾಪಕರಾದಡಾ| ಕೃಷ್ಣಪ್ರಸಾದ್ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರುಇದರ ಅಧ್ಯಕ್ಷರಾದಡಾ| ಪ್ರಭಾಕರಭಟ್ ಭಾಗವಹಿಸಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ನೊಂದಣಿಯನ್ನು ಮಾಡಿಸಿಕೊಳ್ಳಬೇಕು. ಮಾಸ್ಕ್ ಧರಿಸಿ ಸಾಮಾಜಿಕಅಂತರಕಾಯ್ದುಕೊಂಡುಕಾರ್ಯಾಕ್ರಮದಲ್ಲಿ ಭಾಗವಹಿಸಬೇಕಾಗಿ ವಿದ್ಯಾಸಂಸ್ಥೆಯ ಸಂಚಾಲಕರಾದ ವಸಂತ ಮಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
