ಮುಂಬಯಿ: ಲಾಕ್ಡೌನ್ನಿಂದಾಗಿ ಭಾರೀ ಸಂಕಷ್ಟಕ್ಕೊಳಗಾಗಿರುವ ನೂರಾರು ವಲಸೆ ಕಾರ್ಮಿಕರು ಮತ್ತು ಅನಿವಾಸಿ ಮಂದಿಗೆ ಮುಂಬೈ ಉಪನಗರ ಪನ್ವೇಲ್ನಿಂದ ಊರಿಗೆ ತೆರಳಲು ಪನ್ವೇಲ್ನ ಯುವ ಉದ್ಯಮಿ, ಪಿಎಂಸಿಸಿ ಬಿಜೆಪಿ ಕಾರ್ಪೊರೇಟರ್ ಸಂತೋಷ್ ಶೆಟ್ಟಿ ಪನ್ವೇಲ್ ಮತ್ತು ಅವರ ತಂಡ ಸಹಕರಿಸಿತು.
ಪನ್ವೇಲ್ ಸೂಪರ್ ಮಾರುಕಟ್ಟೆ ಬಳಿ ಬೀಡು ಬಿಟ್ಟಿದ್ದ ಅಮಾಯಕ ಕಾರ್ಮಿಕರ ಸ್ಥಿತಿಗತಿ ಗಮನಿಸಿದ ಶೆಟ್ಟಿ ಮತ್ತು ಅವರ ತಂಡ, ಸ್ಥಳೀಯ ಆಶ್ರಮದಲ್ಲಿ ವಾಸ್ತವ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿ ಆಹಾರ, ನೀರು ಪೂರೈಸಿ, ಆರೋಗ್ಯ ತಪಾಸಣೆಗೈದು ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿಗಳ ನೆರವಿನಿಂದ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದೆ.
