ಬಂಟ್ವಾಳ: ಸಜೀಪನಡು ಗ್ರಾಮದ ಶ್ರೀ ಉಳ್ಳಾಲ್ತಿ ನದಿಯೊಳು ದೈವಂಗಳು ನಾಲ್ಕೈತ್ತಾಯ ಪರಿವಾರ ದೈವಗಳು ಪಡ್ಡೇರ ಮಾಡದಲ್ಲಿ ಅಷ್ಟೋತ್ತರ ಶತ ನಾರಿಕೇಳ ಗಣಯಾಗ ಶನಿವಾರ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಆಗಮ ವಿಧಿವಿಧಾನಗಳೊಂದಿಗೆ ಜರಗಿತು.
ಸಜೀಪ ಮಾಗಣೆಯ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ , ಬಿ. ಸದಾನಂದ ಪೂಂಜಾ ಬಿಜನ್ ತಾಡಿ ಗುತ್ತು, ಶಿವರಾಮ ಭಂಡಾರಿ ,ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ ಸಜೀಪ ಗುತ್ತು, ಯಶೋಧರ ರೈ ಇಡಿಪಡ್ಪು ಬಾಳಿಕೆ, ಜಗದೀಶ ಶೆಟ್ಟಿ ಪೋಡೋಳಿಧರ ಬಾಳಿಕೆ, ಕಿಶೋರ್ ಕುಮಾರ್ ಶೆಟ್ಟಿ, ಅಂಕದ ಕೋಡಿ ಬಾಳಿಕೆ, ಆನಂದ ರೈ, ಜೀವನ್ ಆಳ್ವ, ಅಗರಿಕೋಚು ಪೂಜಾರಿ, ಸಾನದಮನೆ ಕುಂಜ್ ಪೂಜಾರಿ,ನಟ್ಟಿಲು ವೆಂಕಪ್ಪ ಪೂಜಾರಿ, ಕೆ ರಾಧಾಕೃಷ್ಣ ಆಳ್ವ, ಶೋಭಿತ್ ಪುಂಜಾ, ಪ್ರದೀಪ್ ಶೆಟ್ಟಿ, ವೆಂಕಟೇಶ್ವರ ಭಟ್ ಮುಳಿಂಜ ಮೊದಲಾದವರಿದ್ದರು. ಸಜಿಪನಡು ಪಡ್ಡೇರ ಮಾಡದಲ್ಲಿ108 ಕಾಯಿ ಗಣಹೋಮವು ನಡೆಯಿತು.


