ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಗೆ ದೇವಾಡಿಗರ ಸಮಾಜದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ನೂತನ ಷಷ್ಠಿರಥದ ಕುತ್ತಿಪೂಜೆಯು ಪೊಳಲಿ ಶಿಲ್ಪಿ ಗಣೇಶ್ ಆಚಾರ್ಯ ಇವರ ನೇತೃತ್ವದಲ್ಲಿ ನಡೆಯಿತು.
ನೂತನ ಕಿರು ಷಷ್ಠಿ ರಥದ ಕೆಲಸಕಾರ್ಯಗಳು ಪೂರ್ಣಗೊಂಡಿದ್ದು ಮಾ.11ರಂದು ದೇವಳಕ್ಕೆ ಹಲವು ಗಣ್ಯರ ಸಮ್ಮುಖದಲ್ಲಿ ಸಮರ್ಪಣೆಗೊಳ್ಳಲಿದೆ.ಈ ಸಂದರ್ಭದಲ್ಲಿ ದೇವಳದ ಅರ್ಚಕರಾದ ಮಾಧವ ಭಟ್ ನಾರಾಯಣ್ ಭಟ್, ರಾರ್ಮ ಭಟ್, ಪರಮೇಶ್ವರ ಭಟ್,ಪೊಳಲಿ ಗಿರಿಪ್ರಕಾಶ್ ತಂತ್ರಿ, ದೇವಳದ ಮೊಕ್ತೇಸರರಾದ ಚೇರ ಸೂರ್ಯನಾರಾಯಣ ರಾವ್,
ಷಷ್ಠಿ ರಥಸಮಾಪಧಣಾ ಸಮಿತಿ ಅಧ್ಯಕ್ಷ ರಾಮ್ದಾಸ್ ಬಂಟ್ವಾಳ್, ಗೌರವಾಧ್ಯಕ್ಷ ಭಾಸ್ಕರ್ ಕದ್ರಿ,ಪ್ರಧಾನ ಕಾರ್ಯದರ್ಶಿ ಪ್ರವೀಣ್, ಕೋಶಾಧಿಕಾರಿ ರಾಜೇಶ್ ದೇವಾಡಿಗ ಪೊಳಲಿ,ಕರುಣಾಕರ ಎಮ್.ಎಚ್,ಪ್ರಿತೇಶ್ ಪೊಳಲಿ, ಕರಿಯಂಗಳ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ನಾಗೇಶ್, ಕೃಷ್ಣಪ್ಪ ದೇವಾಡಿಗ, ಕುಮಾರ್ ದೇವಾಡಿಗ,ಪ್ರಶಾಂತ್ ಪ್ರವೀಣ್, ಊರಿನ ಭಕ್ತರು ಉಪಸ್ಥಿತರಿದ್ದರು.


