ಬಂಟ್ವಾಳ: ಕುಲಾಲ ಸೇವಾ ಸಂಘ ತುಂಬೆ ಇದರ ವತಿಯಿಂದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಸಂಗ್ರಹಿಸಿದ ದೇಣಿಗೆಯನ್ನು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಲ್ಲಿ ಹಸ್ತಾಂತರಿಸಲಾಯಿತು. ಕುಲಾಲ ಸೇವಾ ಸಂಘದ ಅಧ್ಯಕ್ಷ ಐತಪ್ಪ ಕುಲಾಲ್, ಕಾರ್ಯದರ್ಶಿ ಸಂದೀಪ್ ಕುಲಾಲ್ ಗೌರವಾಧ್ಯಕ್ಷ ಲಿಂಗಪ್ಪಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಉಮಾವತಿ ಲಿಂಗಪ್ಪ ಕುಲಾಲ್, ಜೊತೆ ಕಾರ್ಯದರ್ಶಿ ದಿನೇಶ್ ಪೆರ್ಲಬೈಲ್ ಹಾಗೂ ಇತರ ಪಧಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

