ಮೂಡುಬಿದಿರೆ: ಹೊಸನಾಡು-ಕೊಡ್ಯಡ್ಕ ಶ್ರೀ ದೇವಿ ಅನ್ನಪೂರ್ಣೇಶ್ವರಿ ದೇವಳದಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ಮನ್ಮಹಾರಥೋತ್ಸವ ಭಾನುವಾರ ಮಧ್ಯಾಹ್ನ ನಡೆಯಿತು.

ವಾರ್ಷಿಕ ಉತ್ಸವದ ಪ್ರಯುಕ್ತ ಶುಕ್ರವಾರ ದೇವಳದ ಪುರಂದರದಾಸ ಸನ್ನಿಧಿಯಲ್ಲಿ ಭಜನೆ, ಶನಿವಾರ ತೋರಣ ಮುಹೂರ್ತ, ಶ್ರೀ ಪ್ರಸನ್ನ ಗಣಪತಿ ದೇವರಿಗೆ ಮೂಡಪ್ಪ ಸೇವೆ, ಶ್ರೀದೇವಿಗೆ ರಂಗಪೂಜೆ, ಬಲಿ ಉತ್ಸವ, ಕೆರೆದೀಪೋತ್ಸವ ನಡೆಯಿತು. ಭಾನುವಾರ ಹಗಲು ರಥೋತ್ಸವ ನಡೆಯಿತು. ದೇವಳದ ಸ್ಥಾಪಕ ಮೊಕ್ತೇಸರ ಡಾ.ಕೊಡ್ಯಡ್ಕ ಜಯರಾಮ್ ಹೆಗ್ಡೆ ಸಹಿತ ಭಕ್ತರು ಭಾಗವಹಿಸಿದರು.


