ಕುಪ್ಪೆಪದವು:  ಮಂಗಳೂರು ತಾಲೂಕು ಕುಳವೂರು ಬೊಳಿಯ ರಾಜಲಕ್ಷ್ಮೀ ಫ್ರೆಂಡ್ಸ್ ಕ್ಲಬ್ ಇದರ 19 ನೇ ವರ್ಷದ ವಾರ್ಷಿಕೋತ್ಸವ  ಜನವರಿ 25 ರ ಶನಿವಾರ ಕಡೆಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಲಿದೆ.
ಸಾಯಂಕಾಲ 6 ಗಂಟೆಗೆ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 7ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಡಾ|ಭರತ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೃಷ್ಟ್ಣ ಪಾಲೆಮಾರ್, ಜಿಲ್ಲಾಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಹಾಗು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರುಗಳು ಭಾಗವಹಿಸಲಿದ್ದಾರೆ,
ರಾತ್ರಿ 8 ಕ್ಕೆ ಕಲಾಶ್ರೀ ಬೆದ್ರ ತಂಡದ ಸದಸ್ಯರಿಂದ, ಸಂದೀಪ್ ಶೆಟ್ಟಿ ರಾಯಿ ಅವರ “ನಾಲಯಿ ಮಗುರುಜಿ”ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ.

By suddi9

Leave a Reply

Your email address will not be published. Required fields are marked *