ಮೂಡುಬಿದಿರೆ : ಶ್ರೀ ವೀರ ಮಾರುತಿ ದೇವಸ್ಥಾನ ಮೂಡುಬಿದಿರೆ ಇಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿದ ಭಜನಾ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ “ಭಜನೆಯಿಂದ ಬದಲಾವಣೆ” ಕಾರ್ಯಕ್ರಮದಲ್ಲಿ ನಡೆದ ಜಿಲ್ಲಾಮಟ್ಟದ ಕಿರಿಯರ ಭಜನಾ ಸ್ಪರ್ಧೆಯಲ್ಲಿ ಶ್ರೀದುರ್ಗಾಪರಮೇಶ್ವರೀ ಭಜನಾ ಮಂಡಳಿ ಸಿರಿಬೈಲು ಕಡ್ತಲ ತೃತೀಯ ಸ್ಥಾನ ಪಡೆದುಕೊಂಡಿದೆ. ಇವರಿಗೆ ಭಜನಾ ತರಬೇತಿಯನ್ನು ಕಡ್ತಲ ಹರೀಶ್ ಹೆಗ್ಡೆ ಇವರು ನೀಡಿರುತ್ತಾರೆ.



