ಸುದ್ದಿ9ಕೈಕಂಬ: ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು ಅಲ್ಲಿನ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಗಳಿಂದ ಕುಮಾರಿ ಪೂಜೆ ನಡೆಯುತ್ತಿದೆ.
ಅ.1ರಂದು 8ದಿನದ ನವರಾತ್ರಿ ಉತ್ಸವ ನಡೆಯುತ್ತಿದ್ದು, ಆ ದಿನ ಕೂಡಾ ಕುಮಾರಿ ಪೂಜೆ ನೆರವೇರಿತು. ಈ ಬಾರಿ ಸ್ವಾಮೀಜಿಗಳು ನಿಶಾ ಅವರ ಪುತ್ರಿ ಏಳು ವರ್ಷದ ಕಲ್ಪಿತಾಳಿಂದ ಸ್ವಾಮೀಜಿಗಳು ಮಹಾಗೌರಿ ದೇವಿಯನ್ನು ಕಂಡು ಆಕೆಯನ್ನು ಭಕ್ತಿಯಿಂದ ಪೂಜಿಸಿದರು.
ಆಕೆಗೆ ಮಹಾಗೌರಿಯ ಮಂಗಳಕರವಾದ ಉಡುಪನ್ನು ಧರಿಸಿ ಆಕೆಗೆ ದೇವರಂತೆ ಭಕ್ತಿಯಿಂದ ಪೂಜೆ ಸಲ್ಲಿಸಿ ಬಳಿಕ ಕಾಲನ್ನು ಹಿಡಿದರು.
ದಸರಾದ ಪ್ರಯುಕ್ತ ಪ್ರತಿದಿನ ಕುಮಾರಿ ಪೂಜೆ ನಡೆಯುತ್ತಿದ್ದು, ಪುಟಾಣಿ ಹೆಣ್ಣುಮಗುವಿನಲ್ಲಿ ನವದುರ್ಗೆಯರ ಅವತಾರಗಳನ್ನು ಕಾಣಲಾಗುತ್ತಿದೆ.

















