ವಿಟ್ಲ: ಎಳೆಯರ ಬಳಗ ವಿದ್ಯಾವರ್ಧಕ ಸಂಘ ಮತ್ತು ಆಯುರ್ವೇದ ಅಧ್ಯಯನ ಸಂಶೋಧನಾ ಕೇಂದ್ರ ವಿಟ್ಲ ಇದರ 42 ನೇ ವರ್ಷದ ಧನ್ವಂತರಿ ಜಯಂತಿ ಮಹೋತ್ಸವವು 27-10-2019 ರಂದು ವಿಟ್ಲ ಶ್ರೀರಾಮ ನಗರದ ಮಂಗಳಾ ಮಂಟಪದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಮುನಿಯಾಲ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ| ಸತ್ಯನಾರಾಯಣ ವಿಶೇಷ ಉಪನ್ಯಶ ನೀಡಿದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಮತ್ತು ಖ್ಯಾತ ಅಂಕಣಕಾರ ನಾ ಕಾರಂತ ಪೆರಾಜೆ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ ಇವರು ಭಾಗವಹಿಸಿದ್ದರು. ನಿವೃತ್ತ ಅಧ್ಯಾಪಕ ಶ್ರೀನಿವಾಸ ಮರಡಿತ್ತಾಯ ವನಭೋಜನ ವಿಟ್ಲ ಇವರು ಅಧ್ಯಕ್ಷತೆ ವಹಿಸಿದ್ದರು.
ಡಾ| ಪದ್ಮರಾಜ್ ಪ್ರಸ್ತಾವಿಸಿದರು. ಸುಮತಿ ಶಂಕರ ಭಟ್ ಪ್ರಾರ್ಥಿಸಿದರು. ಬದನಾಜೆ ಶಂಕರ ಭಟ್ ಸ್ವಾಗತಿಸಿದರು. ಡಾ| ಮಹೇಶ್ ಬಿ ಸಿ ರೋಡ್ ವಂದಿಸಿದರು. ಶಂಕರನಾರಾಯಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಜಯಕೃಷ್ಣ ಸಹಕರಿಸಿದರು. ವೇದಮೂರ್ತಿ ಕುರಿಯತ್ತಡ್ಕ ನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಧನ್ವಂತರಿ ಪೂಜಾ ಕಾರ್ಯಕ್ರಮ ನಡೆಯಿತು.
