ಬಂಟ್ವಾಳ: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಅವರು ರಾಜ್ಯಾಧ್ಯಕ್ಷರಾದ ಬಳಿಕ  ಮೊದಲ ಬಾರಿಗೆ  ಶುಕ್ರವಾರ ಬಿ.ಸಿ.ರೋಡ್ ನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದರು.ಮಂಗಳೂರಿನಿಂದ ಪುತ್ತೂರಿಗೆ ತೆರಳುವ ದಾರಿ ಮಧ್ಯೆ ಅವರು ಬಿ.ಸಿ.ರೋಡಿನಲ್ಲಿರುವ  ಬಿಜೆಪಿ ಕಚೇರಿಗೆ ಭೇಟಿ ನೀಡಿ,ಕಾರ್ಯ ಕರ್ತರಿಂದ ಅಭಿನಂದನೆ ಸ್ವೀಕರಿಸಿದರು.

IMG-20190830-WA0036 ಈ ಸಂದರ್ಭ ಶಾಸಕ ಯು.ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಿಂದ ರಾಜ್ಯ ಸಮೃದ್ದಿ,ಅಭಿವೃದ್ದಿ ಪಥದಲ್ಲಿ ಸಾಗಲಿ,ಗೌರಿ-ಗಣೇಶ ಹಬ್ಬ ನಾಡಿನ ಜನತೆಗೆ ಸುಖ,ಶಾಂತಿ,ನೆಮ್ಮದಿ ಹಾಗೂ ನಾಡಿಗೆ ಒಳಿತಾಗಲಿ ಎಂದು ಹಾರೈಸಿದರು.ಶಾಸಕ ಯು.ರಾಜೇಶ್ ನಾಯ್ಕ್,      ಮಾಜಿ ವಿ.ಪ.ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್,  ಜಗದೀಶ್ ಅಧಿಕಾರಿ ಮೂಡಬಿದ್ರೆ, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ,ಪ್ರ.ಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ,ರಾಮದಾಸ್ ಬಂಟ್ವಾಳ,ಕಾರ್ಯದರ್ಶಿ ರಮಾನಾಥ ರಾಯಿ,ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ,ಪುರಸಭಾ ಸದಸ್ಯರಾದ ಗೋವಿಂದ ಪ್ರಭು,ವಿದ್ಯಾವತಿ ಅಜ್ಜಿಬೆಟ್ಟು, ತಾಪಂ ಸದಸ್ಯ ಗಣೇಶ್ ಸುವರ್ಣ ತುಂಬೆ, ಜಿಲ್ಲಾ ಯುವ ಮೋರ್ಚಾ ಪ್ರ.  ಕಾರ್ಯದರ್ಶಿಸುದೇಶ್ ಶೆಟ್ಟಿ, ಪಕ್ಷದ  ಪ್ರಮುಖರಾದ          ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ದೇವಪ್ಪ ಪೂಜಾರಿ, ರೋನಾಲ್ಡ್ ಡಿಸೋಜ ಅಮ್ಟಾಡಿ, ಪುರುಷೋತ್ತಮ ಶೆಟ್ಟಿ ವಾಮದಪದವು,ಯಶೋಧರ ಕರ್ಬೆಟ್ಟು, ರಂಜಿತ್    ಮೈರ,  ಸುದರ್ಶನ್ ಬಜ, ಸಂತೋಷ್ ರಾಯಿಬೆಟ್ಟು,   ಚರಣ್ ಜುಮಾದಿ ಗುಡ್ಡೆ ,ಧನಂಜಯ ಶೆಟ್ಟಿ ಸರಪಾಡಿ,ವಿಠಲ ಅಲ್ಲಿಪಾದೆ,  ಹರೀಶ್ ಆಚಾರ್ಯ ರಾಯಿ,ಭಾಸ್ಕರ ಟೈಲರ್,ಪ್ರಕಾಶ್ ಅಂಚನ್  ಸಹಿತ  ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *