ಮುಂಬಯಿ: ಉಪನಗರ ವಿೂರಾರೋಡ್ ಪೂರ್ವದ ಜಿಸಿಸಿ ಕ್ಲಬ್‍ನ ಸನಿಹದ ಶ್ರೀ ರಾಧಾಕೃಷ್ಣ ವೃದ್ಧಾಶ್ರಮ (ಒಲ್ಡ್ ಏಜ್ ಹೋಮ್)ನಲ್ಲಿ ಇತ್ತೀಚೆಗೆ ಸೇವಾಲಯ ಸೇವಾ ಸಮಿತಿ ಟ್ರಸ್ಟ್‍ಲ ಬೆಂಗಳೂರು (ರಿ.) ಮುಂಬಯಿ ಸಮಿತಿಯು ಸೇವಾಲಯ ಆಶ್ರಯ ದೀಪ ಎಂಬ ಸರಳ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

Sevanjali Miraroad
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ವರ್ಲ್ಡ್ ಹ್ಯೂಮನ್ ರೈಟ್ಸ್ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷೆ ಕಿರುತೆರೆ ನಟಿ ಆಶಾ ಶೆಟ್ಟಿ ಆಗಮಿಸಿ ಮಾತನಾಡಿ ಸೇವಾಲಯ ಸೇವಾ ಸಮಿತಿ ಯು . ಯಾವುದೇ ರೀತಿಯ ಪ್ರಚಾರ ವಿಲ್ಲದೆ ಸಮಾಜದ ದಲ್ಲಿ ಹಲವಾರು ಜನ ಪರ ಕೆಲಸ ವು ಸದಾನಂದ್ ಪೂಜಾರಿ ಯವರ. ಮುಂದಾಳತ್ವ ದಲ್ಲಿ ನಡೆಯುವುದು ವಿಶೇಷತೆ ಯಾಗಿದೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ವಿವಿಧ ರೀತಿಯಲ್ಲಿ ಸಮಾಜ ಸೇವೆ ಮಾಡುವವರನ್ನು ಗುರುತಿಸಿ ಅವರಿಗೆ ಹಲವಾರು ಸೇವಾಲಯ ಪ್ರಶಸ್ತಿ ಮತ್ತು ಬಿರುದು ನೀಡಿ ಸೇವಾಲಯ ಎಂಬ ಕಾರ್ಯಕ್ರಮ ವಿಶೇಷವಾಗಿದೆ ಇಂದು ಇಂತಹ ಮಕ್ಕಳ ಅನಾಥ ಆಶ್ರಮ ಮತ್ತು ವೃದ್ಧಾಶ್ರಮವನ್ನು ಗುರುತಿ ಅವರಿಗೆ ಬೇಕಾಗುವ ದಿನ ಬಳಕೆ ವಸ್ತುಗಳೊಂದಿಗೆ ಸೇವಾಲಯ ಆಶ್ರಯ ದೀಪ ಎಂಬ ಸಹಾಯಧನ ನೀಡಿ ಬಡಜನತೆಯ ಕಣ್ಣೀರೋರೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಕಾರ್ಕಳ ಸದಾನಂದ್ ಪೂಜಾರಿ, ಶ್ರೀ ಶನೀಶ್ವರ ಸೇವಾ ಸಮಿತಿ ವಿೂರಾರೋಡ್‍ನ ಸದಸ್ಯೆ ಮೋಹಿತ ಸಿ. ಅಮೀನ್, ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್‍ನ ಮಹಿಳಾ ವಿಭಾಗಧ್ಯಕ್ಷೆ ಕೆ.ಸುಕನ್ಯಾ ಮತ್ತು ಬಾಲಜಿ ಭಜನಾ ಮಂಡಳಿಯ ಜಯಶ್ರೀ ಹಾಗೂ ಮುಂಬಯಿ ಸಮಿತಿಯ ಸದಸ್ಯರು ಮತ್ತು ಇನ್ನಿತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *