ಕೈಕಂಬ:ತುಳುನಾಡ ಕಂಪನ್ನು ಪರದೆಯ ಮೇಲೆ ತೋರಿಸುವ ಪ್ರಯತ್ನದ ಜೊತೆಗೆ, ಊಹೆಗೂ ಮೀರಿ ತರ್ಕಕ್ಕೆ ನಿಲುಕದ ಕಾರಣಗಳನ್ನು ಜಾಲಾಡಿ ಮೂಡಿಸುವ ಅಚ್ಚರಿಯೇ ಗೋಚರ… ಜು.30 ರಂದು “ಗೋಚರ” ಕಿರು ಚಿತ್ರ ಇದರ ಮೂಹೂರ್ತ ಮಾದುಕೋಡಿಯ ಕೊರಗಜ್ಜನ ಸನ್ನಿಧಿಯಲ್ಲಿ ನೆರವೇರಿತು.
ಸ್ಮಾರ್ಟ್1 (smart1) ಕ್ರಿಯೇಷನ್ಸ್ ಅರ್ಪಿಸುವ, ಆರ್ ಪಿ ಉಡುಪಿ ನಿರ್ಮಾಣದಲ್ಲಿ , ವಿಭಿನ್ನ ಕಥಾ ಹಂದವಿರುವ .ಈಗಾಗಲೇ ಶೀರ್ಷಿಕೆಯ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ ಗೋಚರ..!!! ಇದಕ್ಕೆ ಸುಂದರವಾದ ಕಥೆಯನ್ನು ಬರೆದವರು ರೋಹಿತ್ ದೇವಾಡಿಗ ಬಜ್ಪೆ,
ನಿರ್ದೇಶನದಲ್ಲಿ ನಿತೇಶ್ ಪೂಜಾರಿ ಬಜ್ಪೆ ಹಾಗೂ ಪ್ರಸಾದ್ ಕೊಳಂಬೆ , ಸಂಗೀತ ಸುಭಾಷ್ ಮಿಜಾರ್ , ಪುಷ್ಪರಾಜ್ ಕಮ್ಮಾಜೆ,ಸಮಗ್ರ ನಿರ್ವಹಣೆ ಹಾಗೂ ಸಹ ನಿರ್ದೇಶನ ಪುಷ್ಪರಾಜ್ ಕಮ್ಮಾಜೆ, ಇದಕ್ಕೆ ಸುಂದರವಾದ ಸಾಹಿತ್ಯವನ್ನು ಹೆಣೆದವರು ತುಳುನಾಡ ಕಲಶ ಬಿರುದಾಂಕಿತ ಜಿ.ಎಸ್.ಗುರುಪುರ , ಕ್ಯಾಮರ ಕಣ್ಣು ಅಂಕಿತ್ ಬಂಗೇರ ಇವರೆಲ್ಲರ ಒಗ್ಗೂಡುವಿಕೆಯಲ್ಲಿ ಗೋಚರ ಮೂಡಿಬರಲಿದೆ. ಶ್ರೀ ಕೊರಗಜ್ಜ ಸಾನಿಧ್ಯ ಇಲ್ಲಿಯ ಮೋಕ್ತೆಸರ ವಿಜಯ ಸುವರ್ಣ ಗುರೂಜಿ ಪೊಳಲಿ ಚಾಲನೆ ನೀಡಿದರು. ಹರೀಶ್ ಹಾಗೂ ಚಿತ್ರ ತಂಡದೊಂದಿಗೆ ನಿರೂಪಕ ವಿ ಜೆ ಮಧುರಾಜ್ ಹಾಗು ಲೋಕೇಶ್ ಪೂಜಾರಿ ಬಜ್ಪೆ ಪಾಲ್ಗೊಂಡರು.

