ಪೊಳಲಿ: ಬಂಟ್ವಾಳ ಪ್ರಾದೇಶಿಕ ಅರಣ್ಯ ಇಲಾಖೆ, ಪೊಳಲಿ ರಾಮಕೃಷ್ಣ ತಪೋವನ ಆಶ್ರಿತ `ಹಸಿರು ಪ್ರಕೃತಿ’ ಹಾಗೂ ಕರಿಯಂಗಳ-ಬಡಗಬೆಳ್ಳೂರು ಗ್ರಾಮಸ್ಥರ ಸಹಯೋಗದಲ್ಲಿ ಜೂನ್ 30ರಂದು ಹಸಿರು ಕರ್ನಾಟಕ ಯೋಜನೆಯಡಿ ಬಡಗಬೆಳ್ಳೂರಿನಲ್ಲಿ `ವನಮಹೋತ್ಸವ’ ಕಾರ್ಯಕ್ರಮ ಜರುಗಿತು.
ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಲಯ ಅರಣ್ಯಾಧಿಕಾರಿ ಸುರೇಶ್, ವಿನಯ್, ಸಿಬ್ಬಂದಿಗಳಾದ ಭಾಸ್ಕರ, ಜಯರಾಮ ಹಾಗೂ ತಾಪಂ ಸದಸ್ಯ ಯಶವಂತ ಪೂಜಾರಿ, ಗ್ರಾಪಂ ಸದಸ್ಯರಾದ ವಸಂತ, ಯೋಗೀಶ್ ಸೂರ್ಲ, ಯತೀಶ್, ಅಶೋಕ್ ಶೆಟ್ಟಿ, ವಿಠಲ, ಅಣ್ಣು ಪಳ್ಳಿಪಾಡಿ, ಚಂದ್ರಶೇಖರ ರಾವ್ ಮತ್ತು ಹಸನಬ್ಬ ಬಡಗಬೆಳ್ಳೂರು, ಪಳ್ಳಿಪಾಡಿ, ಕಂಡದಬೆಟ್ಟು ಗ್ರಾಮಸ್ಥರು ಭಾಗವಹಿಸಿದ್ದರು ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಸಂದೀಪ್ , ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ ಪೂರ್ಣ ಸಹಕಾರ ನೀಡಿದರು.
