ಪೊಳಲಿ : ನಿಟ್ಟೆ ಯೂನಿವರ್ಸಿಟಿಯ ಕುಲಪತಿ ಡಾ. ವಿನಯ್ ಹೆಗ್ಡೆ ಭಾನುವಾರ ಸಕುಟುಂಬಿಕರಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಡಾ. ಹೆಗ್ಡೆಯವರೊಂದಿಗೆ ಪತ್ನಿ ಸುಜಾತಾ ವಿ ಹೆಗ್ಡೆ, ಹಂಗಾಮಿ ಉಪ-ಕುಲಪತಿ ವಿಶಾಲ್ ಹೆಗ್ಡೆ, ಪತ್ನಿ ರೂಪಾ ವಿ ಹೆಗ್ಡೆ, ಗುರುಪ್ರಸಾದ ಅಡ್ಯಂತಾಯ, ಪತ್ನಿ ಲಾಲ್ನಾ ಜಿ ಅಡ್ಯಂತಾಯ, ಡಾ. ಸುಪ್ರಿಯಾ ಡಿ ರೈ ಮೊದಲಾವರಿದ್ದರು.

“ಶಿಲಾ ಹಾಗೂ ಕಾಷ್ಠ ಕಲಾಕೃತಿಗಳಿಂದ ರಚಿಸಲ್ಪಟ್ಟಿರುವ ಶ್ರೀ ಕ್ಷೇತ್ರ ಪೊಳಲಿ ದೇಗುಲ ಅದ್ಭುತವಾಗಿ ಕಂಗೊಳಿಸುತ್ತಿದೆ. ದೇವಿಯ ದರ್ಶನ ಪಡೆದು ಧನ್ಯನಾದೆ. ದೇವಾಲಯದ ವ್ಯವಸ್ಥೆಗೆ ಅಗತ್ಯವಿರುವ ಸಹಕಾರ ನೀಡುವೆ” ಎಂದು ಡಾ. ವಿನಯ ಹೆಗ್ಡೆ ಹೇಳಿದರು….
ದೇವಸ್ಥಾನದ ಪ್ರಧಾನ ಅರ್ಚಕ ಮಾಧವ ಭಟ್ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ, ಮೊಕ್ತೇಸರ ಯು ತಾರನಾಥ ಆಳ್ವ, ಶಾಸಕ ರಾಜೇಶ್ ನಾಯ್ಕ್, ಕೃಷ್ಣಕುಮಾರ್ ಪೂಂಜ, ಕೃಷ್ಣರಾಜ ಮಾರ್ಲ, ಪ್ರಸನ್ನ ಕುಮಾರ್ ಶೆಟ್ಟಿ, ಗಾಯತ್ರಿ ಪಿ ಶೆಟ್ಟಿ, ಹೇಮಂತ ಶೆಟ್ಟಿ, ದೀಕ್ಷಿತ್ ರೈ ಮಳಲಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಇದ್ದರು. ದೇವಸ್ಥಾನದ ವತಿಯಿಂದ ಡಾ. ಹೆಗ್ಡೆ ಹಾಗೂ ಕುಟುಂಬಿಕರಿಗೆ ಸ್ಮರಣಿಕೆ ಹಾಗೂ ಶಾಲು ಹೊದಿಸಿ ಸತ್ಕರಿಸಲಾಯಿತು.






