ಬಜ್ಪೆ: ಬಜ್ಪೆ ವಿಮಾನ ನಿಲ್ದಾಣದಲ್ಲಿ ಯಾನಿಯೋರ್ವನಿಂದ ಬಾಂಬ್ ತಯಾರಿಸುವ ಸಾಮಗ್ರಿಗಳು ಪತ್ತೆಯಾಗಿದ್ದು ಆತನನ್ನು ಬಂಧಿಸಲಾಗಿದೆ. ಈತನನ್ನು ಕೇರಳ ನಿವಾಸಿ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿಯ ದುಬೈಗೆ ತೆರಳುವ ಜೆಟ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಕರನ್ನು ತಪಾಸಣೆ ನಡೆಸುವಾಗ ಅಬ್ದುಲ್ ಖಾದರ್ನ ಬ್ಯಾಗ್ನಲ್ಲಿ ಅಮೋನಿಯಂ ನೈಟ್ರೇಟ್ಯುಕ್ತ ವಸ್ತುಗಳು ಸಿಕ್ಕಿದ್ದು, ತಕ್ಷಣ ಬಂಧಿಸಲಾಗಿದೆ.
ನೈಟ್ರೇಟ್ಯುಕ್ತ ಸಾಮಗ್ರಿಗಳನ್ನು ನಿಲ್ದಾಣದ ಪಕ್ಕದ ಬದಿಯಲ್ಲಿ ಮರಳು ಹಾಕಿ ಮುಚ್ಚಿಡಲಾಗಿದ್ದು, ಭಾರಿ ಬಿಗಿ ಪಹರೆ ವಹಿಸಲಾಗಿದೆ, ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯದಳವನ್ನು ಕರೆಸಲಾಗಿದ್ದು ಕಾಯಲಾಗುತ್ತಿದೆ
