ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ನೂತನ ಕೊಡಿಮರದ ಸ್ಥಾಪನೆಯ ಪೂರ್ವಭಾವಿಯಾಗಿ ಪುಣ್ಯಾಹಕಲಶ, ನಿಧಿಕುಂಭ ಸ್ಥಾಪನೆ, ಆದಾರಶಿಲೆಗೆ ರತ್ನನ್ಯಾಸಪೂಜೆನೆರವೇರಿತು. ಸೋಮವಾರ ನೂರಾರು ಭಕ್ತರ ಸಮಕ್ಷಮದಲ್ಲಿ ನಡೆಯಿತು. 
ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ ಪೂಜಾವಿಧಿವಿದಾನಗಳು ನೆರವೇರಿಸಿದರು. ದೇವಳದ ಪ್ರ. ಅರ್ಚಕರಾದ ಮಾಧವ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್, ವಿಷ್ಣುಮೂರ್ತಿ ನಟ್ಟೋಜ,ಮಾಧವ ಮಯ್ಯ, ಚೇರಾ ಹಿಮಕರ ರಾವ್ ಪೂಜೆಯಲ್ಲಿ ಸಹಕರಿಸಿದರು. 
ವಾಸ್ತುಶಿಲ್ಪಿ ಮಹೇಶ ಮುನಿಯಂಗಳ , ಕಾರ್ಕಾಳ ಶಿಲ್ಪಿ ಕೃಷ್ಣ ಆಚಾರ್ಯ, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ರಮಾನಾಥ ರೈ, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೊಟ್ಯಾನ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಹರಿಕೃಷ್ಣ ಬಂಟ್ವಾಳ್, ಗಿರಿಧರ ಶೆಟ್ಟಿ, ವೆಂಕಟೇಶ್ ನಾವಡ,ಸುಬ್ರಾಯ ಕಾರಂತ, ಎಂಜಿನೀಯರ್ ರಿತೇಶ್, ಗಿತೇಶ್, ಬೇಬಿ ಪೂಜಾರಿ, ನೂತನಧ್ವಜಸ್ತಂಭ ನಿರ್ಮಾಣ ಸಮಿತಿಯ ಗೌರವಧ್ಯಕ್ಷ ರಾಮದಾಸ್ ಕೋಟ್ಯಾನ್ ಮಜಿಲಗುತ್ತು, ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಪುರುಷ ಎನ್ ಸಾಲಿಯಾನ್, ಬಳ್ಳಿ ಚಂದ್ರಶೇಖರ , ಗೋಪಲಕೃಷ್ಣ ಕೈಕಂಬ, ಉಮೇಶ್ ಪೂಜಾರಿ ಬಾರಿಂಜ,ಜಯಾನಂದ ಅಂಚನ್, ನಾರಾಯಣ ಎಂ ಅಮ್ಮುಂಜೆ, ರಾಜು ಕೋಟ್ಯಾನ್, ಯಶವಂತ ಕೋಟ್ಯಾನ್, ಭುವನೇಶ್ ಪಚಿನಡ್ಕ, ಚಂದಪ್ಪ ಅಂಚನ್ ಮಜಿಲಗುತ್ತು, ಗಣೇಶ ಪೂಜಾರಿ, ಸದಾಶಿವ ಕರ್ಕೇರಾ ಕಾಜಿಲ,ರಾಮಪ್ಪ ಪೂಜಾರಿ , ಪ್ರಶಾಂತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.







