ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಡಿ’ಗ್ರೂಪ್ ನೌಕರರ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ನೂತನ ಅಧ್ಯಕ್ಷ ಕೇಶವ ಕೆ., ಮಾಜಿ ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷ ಶಿವರಾಮ, ಕಾರ್ಯದರ್ಶಿ ರವೀಂದ್ರ ಕೆ., ಕೋಶಾಧಿಕಾರಿ ನೇಮಣ್ಣ ಗೌಡ, ಪ್ರಮುಖರಾದ ಕೃಷ್ಣಪ್ಪ ಬಿ., ಸಿರಿಲ್ ರಾಬರ್ಟ್ ಡಿಸೋಜ ಮತ್ತಿತರರು ಇದ್ದರು.
