ಕುಪ್ಪೆಪದವು: ಮುಂಬರುವ ನವರಾತ್ರಿ ಹಬ್ಬದ ಪ್ರಯುಕ್ತ ಭಾನುವಾರ ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಕುಪ್ಪೆಪದವು ಶ್ರೀ ದುರ್ಗೇಶ್ವರಿ ದೇವಸ್ಥಾನದ ಸುತ್ತಲ ಪ್ರದೇಶದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಕುಪ್ಪೆಪದವು ಶ್ರೀರಾಮ ಶಾಖೆಯ ಕಾರ್ಯಕರ್ತರು ಸ್ವಚ್ಚತಾ ಕಾರ್ಯ ನಡೆಸಿದರು.
ವಿಹಿಂಪ ಬಜರಂಗ ದಳ ಘಟಕದ ಸ್ಥಾಪಕ ಅಧ್ಯಕ್ಷ ಜಗದೀಶ ಪಾಕಜೆ, ಸಂಚಾಲಕ ಚಂದ್ರಹಾಸ ಅಗರು, ವಿಹಿಂಪ ಗುರುಪುರ ಪ್ರಖಂಡ ಕಾರ್ಯದರ್ಶಿ ಸುನಿಲ್, ಮಾಜಿ ಸಂಚಾಲಕ ನಿತೇಶ್ ದೊಡ್ಡಳಿಕೆ, ವಿನೋದ್ ಅಂಬೆಲೆಟ್ಟು, ಶೇಖರ್ ನೇಲಚ್ಚಿಲ್ ಮೊದಲಾದವರಿದ್ದರು.

