ಸುರತ್ಕಲ್: ಸಸಿಹಿತ್ಲು ಬಳಿ ಅಳಿವೆಯಲ್ಲಿ ಇತ್ತೀಚೆಗೆ ನಡೆದ ದೋಣಿ ದುರಂತದಲ್ಲಿ ಮೃತರಾದ ಮಧುಕರ ಬಂಗೇರ ಅವರ ಪತ್ನಿ ಹಾಗೂ ಕುಟುಂಬಿಕರಿಗೆ ಸಸಿಹಿತ್ಲು ಜನರ್ಾರ್ದನ ಸಾಲ್ಯಾನ್ ಮತ್ತು ಮನೆಯವರ ವತಿಯಿಂದ ಒಟ್ಟು ಸುಮರು 30 ಸಾವಿರ ರೂ. ನೆರವು ಭಾನುವಾರ ಹಸ್ತಾಂತರಿಸಲಾಯಿತು. ಜನಾರ್ದನ್ ಸಾಲ್ಯಾನ್, ಲಚ್ಚಿಲ್ ಮೊಗವೀರ ಸಭಾದ ಅಧ್ಯಕ್ಷ ಪೂವಪ್ಪ ಸಾಲ್ಯಾನ್, ಕದಿಕೆ ಮೊಗವೀರ ಸಭಾದ ಮಾಜಿ ಅಧ್ಯಕ್ಷ ಮಾಧವ ತಿಂಗಳಾಯ, ಮೂಲ್ಕಿ ನಾಲ್ಕು ಪಟ್ಣ ಮೊಗವೀರ ಸಭಾದ ಅಧ್ಯಕ್ಷ ನಾಗೇಶ್ ಬಂಗೇರ ಲಚ್ಚಿಲ್ ಸಸಿಹಿತ್ಲು, ಗಣೇಶ್ ಮೆಂಡನ್ ಸಸಿಹಿತ್ಲು, ಅರವಿಂದ ಸಾಲ್ಯಾನ್ ಸಸಿಹಿತ್ಲು ಮೊದಲಾದವರು ಉಪಸ್ಥಿರಿದ್ದರು.

