ಕಿನ್ನಿಗೋಳಿ: ಕಿನ್ನಿಗೋಳಿ – ಮೂರು ಕಾವೇರಿ ರಾಜ್ಯ ಹೆದ್ದಾರಿಯ ಕಿನ್ನಿಗೋಳಿ ಗ್ರಾಮ ಪಂಚಾಯತ್ ಹತ್ತಿರದ ರಸ್ತೆ ಬದಿಯ ಮರ ರಾತ್ರಿ ಮಳೆಗೆ ಪಕ್ಕದ ಅರಾಹ್ನ ಕಟ್ಟಡಕ್ಕೆ ಬಿದ್ದು ಕಟ್ಟಡ ಎದುರು ಭಾಗದ ತಗುಡ ಚಪ್ಪರ ಸಹಿತ ಹಾನಿಯಾಗಿದೆ. ಸತ್ತ ಹಲಸಿನ ಮರ ಇದಾಗಿದ್ದು, ಇದರ ಸುತ್ತ ಗೋಳೀ ಮರವ ಬೆಳೆದಿದ್ದು ಹಲಸಿನ ಮರದ ಜೊತೆ ಗೋಳಿ ಮರವೂ ಬಿದ್ದಿದೆ.
ಈ ಮರ ಅಪಾಯಕಾರಿಯಾಗಿದೆ ಇದನ್ನು ತೆಗೆಯಬೇಕು ಎಂದು ಕಟ್ಟಡ ಮಾಲಕ ಹೊಸ್ವಲ್ಡ್ ಡಿ ಸೋಜ ಮತ್ತು ಅಂಗಡಿ ಮಾಲಕ ಶಿವಪ್ರಸಾದ್ ಆಚಾರ್ಯ ಕಿನ್ನಿಗೋಳಿ ಪಂಚಾಯತ್ ಮತ್ತು ಅರಣ್ಯ ಅಧಿಕಾರಿಗಳಿಗೆ ಅಧಿಕೃತವಾಗಿ ದೂರು ನೀಡಿದ್ದರು ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.
