ಬಂಟ್ವಾಳ: ತಾಲೂಕು ಗಾಣಿಗರ ಸೇವಾ ಸಂಘ ಪಾಣೆಮಂಗಳೂರು ವತಿಯಿಂದ ಗಾಣಿಗ ಸಮಾಜದ ಕುಲಗುರು ಬೆಂಗಳೂರಿನ ಕುಂದಾಪುರ ವ್ಯಾಸರಾಯ ಮಠದ ಶ್ರೀ ಶ್ರೀ ಲಕ್ಷ್ಮೀಂದ್ರ ತೀರ್ಥ ಸ್ವಾಮೀಜಿರಿಗೆ ಪಾದುಕಾ ಪೂಜೆಯನ್ನು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು.
ಈ ವೇಳೆ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪಾದುಕಾ ಪೂಜೆ ಮಾಡಿ ಸ್ವಾಮೀಜಿಯಿಂದ ಮಂತ್ರಾಕ್ಷತೆ ಪಡೆದು ಆಶಿರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ತಾಲೂಕು ಗಾಣಿಗ ಸಮಾಜ ಅಧ್ಯಕ್ಷ ರಘು ಸಫಲ್ಯ, ಉಪಾಧ್ಯಕ್ಷ ನಾಗೇಶ್ಕಲ್ಲಡ್ಕ, ಕೊಳ್ನಾಡು ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ ಉಪಸ್ಥಿತರಿದ್ದರು.


