ಚಳ್ಳಕೆರೆ: ಖಾಸಗಿ ಬಸ್ ಹಾಗೂ ಕಾರ್ ನಡುವೇ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ಪಟ್ಟಣದ ಅರಣ್ಯ ವಲಯ ಬಳಿ ಸಂಭವಿಸಿದೆ.
ಹಾಲುಗೊಂಡನಹಳ್ಳಿ ಗ್ರಾಮಸ್ಥ ತಿಪ್ಪೆಸ್ವಾಮಿ, ರಾಮಮೂರ್ತಿ ಗಾಯಗೊಂಡವರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದುರ್ಗದಿಂದ ಚಳ್ಳಕೆರೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಚಿತ್ರದುರ್ಗ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಪೋಲಿಸ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

