ಮಲ್ಪ್ರೆ: ಜೆಸಿಐ ಭಾರತದ ವಲಯ 15 ಇದರ ವಲಯ ಉಪಾಧ್ಯಕ್ಷರಾಗಿ ಜೆಸಿಐ ಉಡುಪಿ ಸಿಟಿ ಪೂರ್ವ ಅಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲುರವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಇತ್ತೀಚೆಗೆ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ಆಯ್ಕೆಯಾಗಿದ್ದಾರೆ.
ಉಡುಪಿ,ದ.ಕ ಮತ್ತು ಉ.ಕ ಜಿಲ್ಲೆಯನ್ನು ಒಳಗೊಂಡ ಜೇಸಿ ವಲಯ 15 ಜೆಸಿಐ ಭಾರದ ಪ್ರತಿಷ್ಠಿತ ವಲಯವಾಗಿದೆ. ಇವರು ಅತ್ಯುತ್ತಮ ವಲಯ ಅಧಿಕಾರಿ ಪ್ರಶಸ್ತಿ ಪಡೆದಿದ್ದು, ಹಲವಾರು ಸಮಾಜಿಕ ಚಟುವಟಿಕೆಗಳಲ್ಲಿ ತನ್ನನು ತಾನು ತೊಡಗಿಸಿಕೊಂಡಿದ್ದಾರೆ. ವಲಯಾಧ್ಯಕ್ಷರಾಕೇಶ್ ಕುಂಜೂರುರವರ ಮಾರ್ಗದರ್ಶನ ಮತ್ತು ವಲಯದ ಹಿರಿಯಕಿರಿಯ ಜೇಸಿಗಳ ಸಹಕಾರದಲ್ಲಿ ಇವರು ಕಾರ್ಯನಿರ್ವಹಿಸಲಿರುವರು.
