ತುಂಬು ಯವ್ವನದ ಕಾಲವಿದು
ಬಚ್ಚಿಟ್ಟ ಕನಸೆಲ್ಲ ಎಚ್ಚೆತ್ತು, ಗರಿಗೆದರಿ ಹಾರಲು ಸಿದ್ದವಾದಂತೆ ಮುಗಿಲೆಡೆಗೆ..
ಕೈಯಲ್ಲಿ ಪುಸ್ತಕ, ಜೇಬಲ್ಲಿ ಲೇಖನಿ
ಜಗವನ್ನೇ ಗೆಲ್ಲ ಹೊರಟ ಅಲೆಗ್ಸಾಂಡರ್ ನಾನು
ಹಿಂಸೆ ಅಂದದಿ ಅಲ್ಲ, ನೀಲಿ ರಕ್ತವ ಚೆಲ್ಲುವ ಅಕ್ಷರದ ಮಾಲೆಯಲಿ
ಜಗವು ಸೋಜಿಗದ ಗೂಡು ನನ್ನ ಪದಗಳ ಮರೆಯಲಿ….
ಮಾಳ ಸುಜಿತ್ ಶೆಟ್ಟಿ (ಮನಸ್ಪತಿ)


