ಕಿನ್ನಿಗೋಳಿ; ಯುಗಪುರುಷ ಪ್ರಕಟನಾಲಯದ, ಬಿ.ಕೆ ಶ್ರೀಮತಿ ರಾವ್ ಅವರ ಮಹಿಳಾ ಹರಿದಾಸ ದರ್ಪಣ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ನ ಮಾಜೀ ಅದ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆ ಮಾಡಿದರು.ಈ ಸಂದರ್ಭ ಸಂಪಾದಕಿ ಬಿ.ಕೆ ಶ್ರೀಮತಿ ರಾವ್ ರವರನ್ನು ಯುಗಪುರುಷ ಪ್ರಕಟನಾಲಯದ ವತಿಯಿಂದ ಸನ್ಮಾನಿಸಲಾಯಿತು .
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಲಕ್ಷೀನಾರಾಯಣ ಅಸ್ರಣ್ಣ, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಉಳೆಪಾಡಿ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್, ಹಿರಿಯ ಸಾಹಿತಿ ಕೆ.ಜಿ.ಮಲ್ಯ, ಸಾಹಿತಿ ಹರಿಶ್ಚಂದ್ರ ಸಾಲ್ಯಾನ್, ಕಿನ್ನಿಗೋಳಿ ಪಂಚಾಯತ್ ಸದಸ್ಯ ದೇವ ಪ್ರಸಾದ್ ಪುನರೂರು, ಉದ್ಯಮಿ ಪ್ರಥ್ವಿರಾಜ್ ಆಚಾರ್ಯ, ಕಿನ್ನಿಗೋಳಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಕುಲಾಲ್, ಜಯರಾಮ ಶೆಟ್ಟಿ ಮತ್ತಿತರರು ಇದ್ದರು.
