ಬಜ್ಪೆ: ಜೆಬಿಎಫ್ ಕಂಪೆನಿಯು ಉದ್ಯೋಗಿಗಳಿಗೆ ಹುದ್ದೆಯಲ್ಲಿ ತಾರತಮ್ಯ, ವೇತನ ಇತ್ಯಾದಿ ತಾರತಮ್ಯ ಎಸಗಿ ವಂಚಿಸುತ್ತಿದೆ ಎಂದು ಆರೋಪಿಸಿ ಎಂಎಸ್ಇಝಡ್ ನಿರ್ವಸಿತರ ಹೋರಾಟ ಸಮಿತಿ ಬಜ್ಪೆಯಲ್ಲಿ ಪ್ರತಿಭಟನೆ ನಡೆಸುತ್ತಿದೆ.

  • 16 bajpe 1
    ಎಂಎಸ್ಇಝಡ್ಗಾಗಿ ಭೂನಿರ್ವಸಿತರಿಗೆ ಉದ್ಯೋಗ ಭರವಸೆ ನೀಡಿ ಇದೀಗ ಉದ್ಯೋಗ ನೀಡದೆ ಜೆಬಿಎಫ್ ಪೆಟ್ರೋಕೆಮಿಕಲ್ಸ್ ಕಂಪೆನಿ ತನ್ನ ಪಿಡಿಎಫ್ ಕಾರ್ಮಿಕರಿಗೆ ಹುದ್ದೆಯಲ್ಲಿ ತಾರತಮ್ಯ, ವೇತನ ತಾರತಮ್ಯ ಕಾರ್ಮಿಕರಿಗೆ ಮೆಡಿಕಲ್ ಇನ್ಸುರೆನ್ಸ್ ಮತ್ತಿತರ ಸೌಲಭ್ಯ ನೀಡದೆ ವಂಚಿಸುತ್ತಿದೆ. ಈ ಬಗ್ಗೆ ಭೂ ನಿರ್ವಸಿತ ಕಾರ್ಮಿಕರು ಕಳೆದ ಆರು ತಿಂಗಳಿನಿಂದ ಈ ತಾರತಮ್ಯ ಸರಿಪಡಿಸಲು ಹಾಗೂ ಕಾರ್ಮಿಕರಿಗೆ ಸವಲತ್ತು ನೀಡಲು ಹಲವಾರು ಬಾರಿ ಕಂಎಪನಿಯ ಅಧಿಕಾರಿಗಳಿಗೆ ಕಾರ್ಮಿಕರು ಮನವಿ ಸಲ್ಲಿಸಿದ್ದರು. ಆದರೆ ಈವರೆಗೆ ಕಂಪೆನಿ ಸಮರ್ಪಕ ಉತ್ತರ ನೀಡಿಲ್ಲ ಎ ಪ್ರತಿಭಟನಾಕಾರರು ಆರೋಪಿಸಿದ್ದಾರೆ.
    ಕಳೆ ಮಾರ್ಚ 28ರಿಂದ 58 ಪಿಡಿಎಫ್ ಕಾರ್ಮಿಕರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಈ ನಡುವೆ ಕಾರ್ಮಿಕರನ್ನು ಹತ್ತಿಕ್ಕುವ ಸಲುವಾಗಿ ನ್ಯಾಯಾಲಯದಿಂದ ಪ್ರತಿಭಟನೆಗೆ ಪ್ರತಿಬಂಧಕಾಜ್ಞೆ ತಂದು ಕಾರ್ಮಿಕರ ಹೋರಾಟಕ್ಕೆ ತಡೆ ನೀಡಿದೆ. ಆದರೆ ನ್ಯಾಯಾಲಯದ ಆದೇಶದಂತೆ 100 ಮೀಟರ್ ಒಳಗಡೆ ಪ್ರತಿಭಟನೆ ನಡೆಸದಂತೆ ಆದೇಶ ನೀಡಿದೆ. ಈ ನಡುವೆ ತಮ್ಮ ಬೇಡಿಕೆಗಳ ಬಗ್ಗೆ ಕಚಚರ್ೆ ನಡೆಸಲು ಜಂಟಿ ಸಭೆಯನ್ನು ಕರೆಯಲು ಕಂಪೆನಿ ಜೊತೆ ಹಲವಾರು ಬಾರಿ ಕೇಳಿಕೊಂಡರೂ ಈವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದಕ್ಕಾಗಿ ಈ ಹೋರಾಟ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
    ಎಂಎಸ್ಈಝಡ್ ಯೋಜನೆಯಡಿಯಲ್ಲಿ ನಾವು ಮನೆ ಹಾಗೂ ಭೂಮಿಯನ್ನು ಕಳೆದುಕೊಂಡಿದ್ದು ಈ ಸಮಯ ಕಂಪೆನಿಯು ತಮಗೆ ಉತ್ತಮ ಸಂಬಳದ ಉದ್ಯೋಗ ಭರವಸೆ ನೀಡಿತ್ತು. ನಾವು ಕೆಪಿಬಿಯಲ್ಲಿ 2007ರಿಂದ ತರಬೇತಿ ಆರಂಭಿಸಿ 2011ಕ್ಕೆ 3ವರೆ ವರ್ಷಗಳ ತರಬೇತಿ ಪೂತರ್ಿಗೊಳಿಸಿ 2011ರಿಂದ 2014ರ ತನಕ ಉದ್ಯೋಗರಹಿತರಾಗಿದ್ದು, ಇದೀಗ ಸುಮಾರು 3 ವರ್ಷಗಳಿಂದ ಜೆಬಿಎಫ್ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಈ ಅವಧಿಯಲ್ಲಿ ನಾವು 10 ಸಾವಿರ ಸಂಬಳ ಪಡೆಯುತ್ತಿದ್ದೇವೆ. ಈ ಸಂಬಳ ಸಾಲುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗಿದ್ದು, ಇದ್ದ ಜಮೀನನ್ನೂ ಕಳೆದುಕೊಂಡು ಅತಂತ್ರ ಸ್ಥಿತಿಯಲಿದ್ದೇವೆ. ಆದ್ದರಿಂದ ತಮ್ಮ ಹಲವು ಸಮಸ್ಯೆಯನ್ನು ಕಂಪೆನಿ ಕೂಡಲೇ ನೀಗಿಸಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *