ಬಂಟ್ವಾಳ: ಇತ್ತೀಚೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಭಸ್ಮವಾದ ಕರ್ಪೆ ಗ್ರಾಮದ ಮೀನಾಕ್ಷಿಯವರ ಮನೆಯ ಪುನನಿರ್ಮಾಣಕ್ಕೆ ಪ್ರಕೃತಿ ವಿಕೋಪದಡಿಯಲ್ಲಿ ರೂ. 70 ಸಾವಿರದ ಚೆಕ್ ಅನ್ನು ತಹಶೀಲ್ದಾರ್ ಮಲ್ಲೇಸ್ವಾಮಿ ನೀಡಿದರು. ಈ ಸಂದರ್ಬದಲ್ಲಿ ಮಾಯಿಲಪ್ಪ ಸಾಲ್ಯಾನ್, ದೇವಪ್ಪ ಕರ್ಕೇರಾ ಕಂದಾಯ ನಿರೀಕ್ಷಕ ಸಾಧು, ಗ್ರಾಮಕರಣಿಕ ಶಿವಾನಂದ ನಾಟೇಕರ್ ಉಪಸ್ಥಿತರಿದ್ದರು .

