ಮುಂಬಯಿ: ಶೈಕ್ಷಣಿಕ-ಸಾಮಾಜಿಕ, ಸಾಂಸ್ಕೃತಿಕ ಸೇವೆಗಳ ತ್ರಿವಿಧ ಕಾಯಕಗಳನ್ನಿರಿಸಿ ಕಳೆದ ಸುಮಾರು ಆರು ದಶಕಗಳಲ್ಲಿ ಸೇವಾ ನಿರತ ಚೆಂಬೂರು ಕರ್ನಾಟಕ ಸಂಘ (ರಿ.) ಇದರ 60ನೇ ವಾರ್ಷಿಕ ಮಹಾಸಭೆಯು ಇತ್ತಿಚೇಗೆ ಚೆಂಬೂರು ಘಾಟ್ಲ ಇಲ್ಲಿನ ಸಂಸ್ಥೆಯ ವಿದ್ಯಾಸಾಗರ ಸಂಕೀರ್ಣದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಜಯ ಎನ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೇರವೇರಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನ್ಯಾ| ಸುಧಾಕರ ಎನ್.ಅಂಚನ್, ಗೌ| ಪ್ರ| ಕಾರ್ಯದರ್ಶಿ ಗುಣಾಕರ ಹೆಚ್.ಹೆಗ್ಡೆ, ಜೊತೆ ಕಾರ್ಯದರ್ಶಿ ರಂಜನ್ ಕುಮಾರ್ ಅಮೀನ್, ಕೋಶಾಧಿಕಾರಿ ಯೋಗೇಶ್ ಗುಜರನ್, ಜೊತೆ ಕೋಶಾಧಿಕಾರಿ ಸುಧಾಕರ ಅಂಚನ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಭಾಕರ ಬೋಳಾರ್, ಮಧುಕರ ಬೈಲೂರು, ವಿಶ್ವನಾಥ ಶೇಣವ, ರಾಮ ಪೂಜಾರಿ, ಮೋಹನ್ ಕಾಂಚನ್, ಮೋಹನ್ ಕಾಂಚನ್, ಟಿ.ಆರ್.ಶೆಟ್ಟಿ, ದೇವದಾಸ್ ಶೆಟ್ಟಿಗಾರ್, ದಯಾಸಾಗರ್ ಚೌಟ, ಸಂಜೀವ ಶೆಟ್ಟಿ, ಸುಂದರ ಕೋಟ್ಯಾನ್, ಜಯ ಎಮ್.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

