ಬಜಪೆ: ಬಜಪೆಯ ಸ್ವಾಮಿಲಪದವಿನಲ್ಲಿ ನಿರ್ಮಾಣಗೊಂಡಿರುವ ರೋಟರಿ ಕ್ಲಬ್ ಬಜಪೆ ಇದರ ನೂತನ ಸುಸಜ್ಜಿತ ರೋಟರಿ ಭವನವನ್ನು ಮಾ.15 ಭಾನುವಾರದಂದು ಜಿಲ್ಲಾ ರೋಟರಿ ಗವರ್ನರ್ ಡಾ| ಭಾಸ್ಕರ್.ಎಸ್ ಅವರು ಉದ್ಘಾಟಿಸಿ ಮಾತಾಡಿ ಅವರು ರೋಟರಿಯು ಜಗತ್ತಿನಲ್ಲಿ ಬದಲಾವಣೆಯ ಪ್ರಾರಂಭವನ್ನು ಮಾಡುದಾಗಿ ಖಂಡಿತವಾಗಿಯೂ ಹೇಳಬಹುದು ಏಕೆಂದರೆ ರೋಟರಿಯಲ್ಲಿ ಸೇವಾ ಮನೋಭವ ಇದೆ ಉತ್ತಮ ಕಾರ್ಯಗಳನ್ನು ರೋಟರಿಯು ಮಾಡುತ್ತ ಬಂದಿದೆ.ರೋಟರಿ ಸ್ವಚ್ಛಭಾರತದ ಅಭಿಯಾನದಲ್ಲಿ ತೊಡಗಿಸಿಕೊಂಡು ಸ್ವಚ್ಛತೆಯನ್ನು ಕಾಪಡಿಕೊಂಡು ಬಂದಿದೆ ಈ ಪರಿಸರದಲ್ಲಿ ಕೂಡ ಸೇವಾ ಕಾರ್ಯವನ್ನು ನಾವೆಲ್ಲ ಒಟ್ಟಾಗಿ ಸೇರಿ ಮಾಡೋಣ ಮತ್ತು ಈ ಭವನವು ಪರಿಸರದ ಜನರ ಕಷ್ಟ ಮತ್ತು ನೊಂದವರಿಗೆ ಸಹಾಯ ಮಾಡಲು ಸಹಕಾರಿಯಾಗಲಿ ಎಂದರು.


ನೂತನ ರೋಟರಿ ಭವನಕ್ಕೆ ಸ್ಥಳದಾನ ಮಾಡಿದ ರೊ. ಸುಕುಮಾರ್ ಸಾಲ್ಯಾನ್ ಮಾತಾಡಿ ಜಗತ್ತಿಗೆ ರೋಟರಿಯಿಂದ ಬಹಳಷ್ಟು ಸಮಾಜಸೇವೆ ಕೆಲಸಗಳು ಆಗಿವೆ ಎಂದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ನಾಗೇಂದ್ರ ಕ್ಲಬ್ ನ ಸ್ಮರಣಸಂಚಿಕೆ “ಪ್ರತಿಬಿಂಬ”ವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಭವನಕ್ಕೆ ಸ್ಥಳದಾನ ನೀಡಿದ ರೋ| ಎಂಜೆಎಫ್ ಸುಕುಮಾರ್ ಸಾಲ್ಯಾನ್ ಮತ್ತು ಯಶೋದ ಎಸ್.ಸಾಲ್ಯಾನ್ , ಗುತ್ತಿಗೆದಾರ ಲಿಗೋರಿ ಪಿಂಟೋ, ವಂದನ್ ಪಿಂಟೋ, ರೋಟರಿ ಕ್ಲಬ್ ನ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದ ಬಜಪೆ ಸಂತ ಜೋಸೆಪ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಬ್ರ.ಹೆಕ್ಟರ್ ಪಿಂಟೋ, ರೋಟರಿ ಕ್ಲಬ್ ಬಜಪೆ ಇದರ ಅಧ್ಯಕ್ಷರಾದ ರೊ| ರೋಬರ್ಟ್ ಫ್ರಾಂಕ್ಲಿನ್ ರೇಗೋ, ಯುವಉದ್ಯಮಿ ರೊ| ರವಿ ಪೂಜಾರಿ, ಇವರನ್ನು ಸಮಾರಂಭದಲ್ಲಿ ಸಮ್ಮನಿಸಲಾಯಿತು.ಮುಖ್ಯ ಅತಿಥಿಯಾಗಿ ಜಿಲ್ಲಾ ರೋಟರಿಕೌನ್ಸಿಲರ್ ಸೂರ್ಯಪ್ರಕಾಶ್ ಭಟ್ , ಬಜಪೆ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ರೊ| ಮಾಧವ ಅಮೀನ್, ಝೋನಲ್ ಲೆಪ್ಟಿನೆಂಟ್ ರೊ| ಶರತ್ ಶೆಟ್ಟಿ ಉಪಸ್ಥಿರಿದ್ದರು. ರೋಟರಿ ಕ್ಲಬ್ನ ಅಧ್ಯಕ್ಷ ರೊ| ರೋಬರ್ಟ್ ಫ್ರಾಂಕ್ಲಿನ್ ರೇಗೋ ಸ್ವಾಗತಿಸಿದರು, ರೊ| ಜ್ಯೂಲಿಯೆಟ್ ಮೋರಾಸ್ ಮತ್ತು ರೊ| ಶಾರನ್ ಫೆರ್ನಾಂಡಿಸ್ ಪ್ರಾರ್ಥಿಸಿದರು, ರೊ| ಗೋಪಿನಾಥ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು ಕಾರ್ಯದರ್ಶಿ ರೊ| ಚಂದ್ರಶೇಖರ್ ಎಸ್.ಪೂಜಾರಿ ವಂದಿಸಿದರು












