ಕಿನ್ನಿಗೋಳಿ: ಎ.ಟಿ. ಎಂ ನಲ್ಲಿ ದರೂಡೆ ನಡೆದು ಒಂದು ವರ್ಷವಾದರೂ ಕೆಲವು ಬ್ಯಾಂಕ್ ನಲ್ಲಿ ಇನ್ನೂ ಎಚ್ಚೆತ್ತುಕೊಂಡಿಲ್ಲ ಯಾಕೆಂದರೆ ಇನ್ನೂ ಹಲವು ಕಾವಲುಗಾರರಿಲ್ಲದ ಅನೇಕ ಬ್ಯಾಂಕ್ ಎ.ಟಿ. ಎಂ ಗಳು ಕಾರ್ಯಾಚರಿಸುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಬ್ಯಾಂಕ್ಗಳನ್ನು ಹೊಂದಿದ ಕಿನ್ನಿಗೋಳಿ ಸಮೀಪದ ಮೂರು ಕಾವೇರಿ ವಿಜಯ ಬ್ಯಾಂಕ್ ಎ.ಟಿ. ಎಂ ನಲ್ಲಿ ಕಾವಲುಗಾರನಿಲ್ಲದೆ ಬೀದಿ ನಾಯಿಯೇ ಕಾವಲುಗಾರನಾಗಿದೆ, ಇಲ್ಲಿ ಇದುವರೆಗೆ ಯಾವುದೇ ಕಾವಲುಗಾರರನ್ನು ನೇಮಿಸಲಿಲ್ಲ ಇಲ್ಲಿ ನಿರಂತರ ನಾಯಿಯೊಂದು ಮಲಗುತಿದ್ದರೂ ಕಿನ್ನಿಗೋಳಿಯ ಸಿಂಡಿಕೇಟ್ ಬ್ಯಾಂಕ್ ಮಾತ್ರ ಕ್ಯಾರೇ ಎನ್ನುತ್ತಿಲ್ಲ .
