ಮುಂಬಯಿ : ತುಳುಭಾಷೆಯ ಸರ್ವೋನ್ನತಿಗೆ ಶ್ರಮಿಸುತ್ತಿರುವ ತುಳುನಾಡ ರಕ್ಷಣಾ ವೇದಿಕೆ ಅಂತಾರಾಷ್ಟ್ರೀಯ ಗೌರವಾಧ್ಯಕ್ಷ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅವರನ್ನು ಇತ್ತೀಚೆಗೆ ಮಂಗಳೂರು ಅಲ್ಲಿನ ತುಳುನಾಡ ರಕ್ಷಣಾ ವೇದಿಕೆ ಕಚೇರಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮತ್ತು ವೇದಿಕೆಯ ಪದಾಧಿಕಾರಿಗಳು ಗೌರವ ಪೂರ್ವಕವಾಗಿ ಸನ್ಮಾನಿಸಿ ಅಭಿವಂದಿಸಿದರು.
ಗಲ್ಫ್ ರಾಷ್ಟçದಲ್ಲಿದ್ದರೂ ಕೂಡಾ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಇದರ ಪ್ರತೀ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದು ನಿರಂತರ ಮಾರ್ಗದರ್ಶನ ಸಹಾಯ, ಸಹಕಾರಗಳನ್ನ ಮಾಡುತ್ತಾ ಬಂದಿರುವ ಫ್ರಾಂಕ್ ಫೆರ್ನಾಂಡಿಸ್ ಅವರ ಸೇವೆ ಅನುಪಮವಾಗಿದ್ದು ಅವರೋರ್ವ ವಾಗ್ಮೀಯೂ, ಕೊಡುಗೈದಾನಿಯೂ ಆಗಿ ಗುರುತಿಸಿರುವರು.
