ಮುಂಬಯಿ : ಭಿವಂಡಿ ಸಾಯಿ ಫೌಂಡೇಶನ್ ಸಂಸ್ಥಾಪಕ ಪ್ರದೀಪ್ ವಾಸು ಶೆಟ್ಟಿ ಆ.07 ರಂದು ಶನಿವಾರ ದೆಹಲಿಗೆ ತೆರಳಿ ಕೇಂದ್ರ ಪಂಚಾಯತ್ ರಾಜ್ ಸಚಿವ ಕಪಿಲ್ ಮೊರೇಶ್ವರ ಪಾಟೀಲ್ ಅವರನ್ನು ಸಚಿವರ ನಿವಾಸಕ್ಕೆ ಭೇಟಿ ನೀಡಿ ಹೂಗುಚ್ಛ ನೀಡಿ ಗೌರವಿಸಿದರು.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯ ಇಲ್ಲಿನ ಪ್ರಭಾವಿ ರಾಜಕಾರಣಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಚಿವಾಲಯದ ಪುರ್ರಚನೆಯ ಸಮಯದಲ್ಲಿ ಪಂಚಾಯತ್ ರಾಜ್ ಸಚಿವಾಲಯದಲ್ಲಿ ಕೇಂದ್ರ ಸಚಿವರಾಗಿ ಆಯ್ಕೆಗೊಂದರು. ಈ ಹಿಂದೆ ಥಾಣೆ ಜಿಲ್ಲಾ ಪರಿಷತ್ತ್ ನ ಅಧ್ಯಕ್ಷ ಮತ್ತು ಥಾಣೆ ಜಿಲ್ಲಾ ಸಹಕಾರಿ ಬ್ಯಾಂಕಿನ ಕಾರ್ಯಧ್ಯಕ್ಷ ಆಗಿದ್ದರು. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಿಂದ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಗೊಂಡಿರುವ ಕಪಿಲ್ ಪಾಟೀಲ್ ತುಳು-ಕನ್ನಡಿಗರ ಒಡನಾಟದಲ್ಲಿದ್ದು ಪ್ರದೀಪ್ ಶೆಟ್ಟಿ ಅಭಿವಂದಿಸಿದರು.

