ಕೈಕಂಬ : ಗುರುಪುರ ಮಠದಬೈಲು ಗದ್ದೆಯಲ್ಲಿ ಭಾನುವಾರ ನಡೆದ ಶ್ರೀ ಕಟೀಲು ಯಕ್ಷಗಾನ ಸೇವಾ ಸಮಿತಿ ಹಾಗೂ ಹತ್ತು ಸಮಸ್ತರ ಪ್ರಾಯೋಜಕತ್ವದ ಕಟೀಲು ಮೇಳದ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರಯುಕ್ತ ಗುರುಪುರ ಕೊಳದಬದಿಯ ಶ್ರೀ ಅನ್ನಪೂರ್ಣೇಶ್ವರಿ ದೇವಳದಿಂದ ಮಠದಬೈಲಿಗೆ ಚೆಂಡನಾದ, ಬ್ಯಾಂಡ್ ವಾಲಗದೊಂದಿಗೆ ದೇವರ ಭವ್ಯ ಮೆರವಣಿಗೆ ಸಾಗಿತು.

gur-apl-4-meravanige-1

ಕುಕ್ಕುದಕಟ್ಟೆ, ಉಪ್ಪುಗೂಡು, ಬಂಡಸಾಲೆಯಾಗಿ ಯಕ್ಷಗಾನ ಪ್ರದರ್ಶನದ ಗದ್ದೆಗೆ ತಂಡೋಪತಂಡವಾಗಿ ಸಾಗಿ ಬಂದ ಭವ್ಯ ಮೆರವಣಿಗೆಯಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು ಶೋಭಾ ದಾಮೋದರ್ ನೇತೃತ್ವದ ಗುರುಪುರ ಮಕ್ಕಳ ತಂಡದಿಂದ ಸುಶ್ರಾವ್ಯ ಭಜನೆ-ನೃತ್ಯ ಹಾಗೂ ಶ್ರೀ ಗುರು ಉಳಾಯಿಬೆಟ್ಟು ತಂಡದವರಿಂದ ಚೆಂಡೆನಾದ, ವಿಶಿಷ್ಟ ನೃತ್ಯ ನಡೆಯಿತು.

gur-apl-4-meravanige-5

ಮೆರವಣಿಗೆಯಲ್ಲಿ ಸಮಿತಿ ಅಧ್ಯಕ್ಷ ಸಚಿನ್ ಅಡಪ, ಪದಾಧಿಕಾರಿಗಳಾದ ಜಿ ಎಂ ಉದಯ ಭಟ್, ಗಣೇಶ್ ಕೊಟ್ಟಾರಿ, ವರದರಾಜ್ ಶೆಟ್ಟಿ ಉಪ್ಪುಗೂಡು, ಮಾಧವ ಕಾವ, ಸುನಿಲ್ ಕುಮಾರ್ ಹಾಗೂ ಸಮಿತಿಯ ಸರ್ವ ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಊರ ನಾಗರಿಕರು ಪಾಲ್ಗೊಂಡಿದ್ದರು. ರಾತ್ರಿ ಅತಿ ಸಂಭ್ರಮ-ಸಡಗರದಿಂದ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

gur-apl-4-meravanige-6

By Suddi9

Leave a Reply

Your email address will not be published. Required fields are marked *