ಸುದ್ದಿ9 ಕೈಕಂಬ: ಗಂಜಿಮಠ ಸಮೀಪದ ಗಾಂಧಿನಗರದ ಪುರಾತನವಾದ ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಸ್ಥಾನದ ಜೀಣೋದ್ದಾರಕ್ಕೆ ಶಂಕುಸ್ಥಾಪನೆಯನ್ನು ಆ. 31ರಂದು ಭಾನುವಾರ ಪೂಜಾ ವಿಧಿ ವಿಧಾನಗಳೊದಿಗೆ ನೆರವೇರಿಸಲಾಯಿತು.

ಮಿಜಾರ್ ಪಲ್ಕೆ ಲತೀಸ್ ತಂತ್ರಿ ಅವರ ನೇತೃತ್ವದಲ್ಲಿ ಸಾಸ್ತವು ಶ್ರೀ ವಿಜಯ ವಿಠಲಶೆಟ್ಟಿ ಅವರ ಮಾತೃಶ್ರೀಯವರಾದ ಪ್ರೇಮಲತಾ ವಿ.ಶೆಟ್ಟಿ ಅವರು ಶಿಲಾನ್ಯಾಸ ನೆರವೇರಿಸಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೃಷ್ಣ ಅಮೀನ್ , ಮಹಮ್ಮಾಯಿ ದೇವಸ್ಥಾನದ ಆಡಳಿತ ಮಂಡ:ಳಿಯ ಅಧ್ಯಕ್ಷರಾದ ಕೃಷ್ಣ ಶೆಟ್ಟಿಗಾರ್,ಉಪಾಧ್ಯಕ್ಷ ಜಯಂತ್ ಶೆಟ್ಟಿಗಾರ್,ಜೀಣೋಧ್ದಾರ ಸಮಿತಿ ಅಧ್ಯಕ್ಷರಾದ ಸಂಜೀವ ಪೂಜಾರಿ, ಸುಧಾಕರ ಪಾತ್ರಿ ಮತ್ತಿತರರು ಉಪಸ್ಥಿತರಿದ್ದರು.
