ಕಲ್ಲಡ್ಕ: ಇಲ್ಲಿನ ಶ್ರೀರಾಮ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯೆಯ ಅಪೇಕ್ಷೆ ಬೆಳೆಸಿಕೊಂಡು ಸಂಸ್ಕಾರದ ಜತೆಗೆ ಉತ್ತಮ ಅಂಕ ಪಡೆದು ಶ್ರೇಷ್ಠ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಶಾಲಾ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಸಮವಸ್ತ್ರ, ಬರೆಯುವ ಪುಸ್ತಕ, ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಈ ಅರಣ್ ಭಟ್, ರಮೇಶ್, ಶಿಶು ಮಂದಿರದ ಮುಖ್ಯಶಿಕ್ಷಕಿ ಗಂಗಾ ಮಾತಾಜಿ, ಪ್ರೌಢಶಾಲಾ ವಿಭಾಗದ ವಸಂತಿ ಉಪಸ್ಥಿತರಿದ್ದರು.

