ಬಡಗಬೆಳ್ಳೂರು: ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಪಂಚಗ್ರಾಮದ ಬ್ರಹ್ಮಶ್ರೀ ನಾರಾಯಣಗುರು ಪ್ರತಿಷ್ಠಾಷಷ್ಠಮ ವರ್ದಂತಿ ಉತ್ಸವ ಏ.15ರಂದು ಭಾನುವಾರ ಪುರೋಹಿತ ಎಂ.ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ಪೂಜಾವಿಧಿ ವಿಧಾನಗಳೊಂದಿಗೆ ನಡೆಯಿತು.
ಭಜನೆ,ಕಲಶಾಭಿಷೇಕ, ಸತ್ಯನಾರಾಯಣ ಪೂಜೆ ಮತ್ತು ಗುರು ಪೂಜೆ ನಡೆಯಿತು. ಪಂಚಗ್ರಾಮದ ಅಧ್ಯಕ್ಷ ಗಂಗಾಧರ ಜೆ. ಪೂಜಾರಿ,ರುಕ್ಮಯ ಪೂಜಾರಿ,ಸೇಸಪ್ಪ ಕೊಟ್ಯಾನ್ ಪಚಿನಡ್ಕ, ಉಧ್ಯಮಿಗಳಾದ ರಹೇಶ್, ಸದಾನಂದ, ಕೃಷ್ಣಪ್ಪ ಪೂಜಾರಿ ಕುಕ್ಕಾಜೆ ಹಾಗೂ ಪುರುಷ ಸಾಲಿಯಾನ್, ತಾಚಪ್ಪ ಪೂಜಾರಿ, ರಾಜು ಕೋಟ್ಯಾನ್, ನಾರಾಯಣ ಪೂಜಾರಿ, ವಸಂತ ಅಂಚನ್,ರತ್ನಕಾರ ಪೂಜಾರಿ,ಜನಾರ್ಧನ ಎಚ್ ಎಸ್.,ಬಿ.ಕೆ.ಸರೋಜಿನಿ ಮತ್ತಿತರರು ಉಪಸ್ಥಿತರಿದ್ದರು.



