ಬಜಪೆ: ಮೇ.12ರಂದು ವಿಧಾನ ಸಭೆ ಚುನಾವಣೆ ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮತದಾರರು ಭಯ ಮುಕ್ತರಾಗಿ ಚುನಾವಣೆ ಮಾಡಲು ಬಜಪೆ ಪೊಲೀಸ್ ನಿರೀಕ್ಷಕ ಶ್ರೀ ಪರಶಿವಮೂರ್ತಿ ರವರ ನೇತೃತ್ವದಲ್ಲಿ ಶುಕ್ರವಾರ ಬಜಪೆ ಪೇಟೆಯಿಂದ ಕಿನ್ನಿಪದವುವರೆಗೆ ಅರೆಸೇನಾಪಡೆ (ಸಿಆರ್ ಪಿಎಫ್) ಹಾಗೂ ಬಜಪೆ ಪೊಲೀಸರಿಂದ ಪಥಸಂಚಲನ ನಡೆಸಲಾಯಿತು.


