img_20180322043932

ಛತ್ತರಪುರ್: ಅಯೋಧ್ಯೆಯಲ್ಲಿ ರಾಮ ಮಂದಿರ  ನಿರ್ಮಾಣ  ನಮ್ಮ ಸಂಕಲ್ಪವಾಗಿದ್ದು, ಇದನ್ನು ಮಾಡಿಯೇ ತಿರುತ್ತೇವೆ ಎಂದು ಆರೆಸ್ಸೆಸ್ ​ ಮುಖ್ಯಸ್ಥ ಮೋಹನ್​ ಭಾಗವತ್​ ಪುನರುಚ್ಛರಿಸಿದ್ದಾರೆ.

ನಗರದ ಮೌಸಹಾನಿಯಾದಲ್ಲಿ ಮೋಹನ್​ ಭಾಗವತ್​ 52 ಅಡಿ ಉದ್ದದ ಮಹಾರಾಜ ಛತ್ರಾಸಲ್​ರವರ ಪ್ರತಿಮೆ ಅನಾವರಣಗೊಳಿಸಿ ಅವರು  ಮಾತನಾಡಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಮ್ಮ-ನಿಮ್ಮ ಬಯಕೆಯಷ್ಟೇ ಅಲ್ಲ ಸಂಕಲ್ಪ, ಮಂದಿರ ನಿರ್ಮಾಣಕ್ಕೆ ಇದು ಸೂಕ್ತ ಸಮಯ ಎಂದು ಹೇಳಿದರು.

ಅಯೋಧ್ಯೆಯಲ್ಲಿ   ರಾಮ ಮಂದಿರ  ನಿರ್ಮಾಣ ಮಾಡಲು ಇಚ್ಛಿಸುವರು ರಾಮ ನಡೆದ   ಹಾದಿಯನ್ನೇ ಅನುಸರಿಸಬೇಕು ಎಂದರು.

ಮಹಾರಾಜ ಛತ್ರಸಾಲ್​ರವರು ಶ್ರೇಷ್ಠ ವೀರ ಸೇನಾನಿಯಾಗಿದ್ದರು. ಸಣ್ಣ ಸೇನೆಯ ನೆರವಿನೊಂದಿಗೆ ಅವರು ಶತ್ರುಗಳನ್ನು ಮಣಿಸಿದರು ಎಂದು ಭಾಗವತ್​ ಸ್ಮರಿಸಿದರು.

By suddi9

Leave a Reply

Your email address will not be published. Required fields are marked *