ಗುರುಪುರದ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಾ. 7ರಂದು `ದೃಢ ಕಲಶ’ ಪೂಜೆ ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ಗುರುಪುರ ಹಿಂದೂ ಭಜನಾ ಮಂಡಳಿಯವರ ಭಜನಾ ಕಾರ್ಯಕ್ರಮ ಜರುಗಿತು.
ರತನ್ ಜಿ, ಅನುಶ್ರೀ, ಪುರುಷೋತ್ತಮ, ಹರೀಶ್ ಜಿ, ಪ್ರಾಣೇಶ್ ಆಚಾರ್ಯ, ಶಿವಾನಂದ ಅಯ್ಯ ಹಾಡಿದರು. ಸತೀಶ್ ಕುಲಾಲ್ ಹಾರ್ಮೋನಿಯಂ ಹಾಗೂ ಉಮೇಶ್ ಶೆಟ್ಟಿಗಾರ ತಬಲಾ ನುಡಿಸಿದರು. ದೇವಸ್ಥಾನದ ಪರವಾಗಿ ಟ್ರಸ್ಟೊಂದು ರಚಿಸುವ ಬಗ್ಗೆ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

