ಸುದ್ದಿ9ಕೈಕಂಬ: ಮನೆಯಲ್ಲಿದ್ದ ಹಳ್ಳಿಗರನ್ನು ಶ್ರೀಕೃಷ್ಣ ಪರಮಾತ್ಮ ಕುಣಿಸಿದ ಅಪರೂಪದ ಸನ್ನಿವೇಶ ಮಳಲಿ ವಠಾರದಲ್ಲಿ ಕಂಡುಬಂದಿತು, ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನ ಬೈಲು ಮಳಲಿ ಇಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀಕೃಷ್ಣ ಬಾಲಲೀಲೆ ತೋರಿದ ವಿವಿಧ ವಿನೋದಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮನೆಯಲ್ಲಿ ನೂರಾರು ಜಂಜಾಟಗಳಿಂದ ದಣಿದಿದ್ದ ಹಳ್ಳಿಯ ಮಹಿಳೆಯರು, ಮಕ್ಕಳು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗದ್ದೆಯ ಕೆಸರಲ್ಲಿ ಮಿಂದೆದ್ದರು, ಹಲವಾರು ಕ್ರೀಡಾ ಕಾರ್ಯಕ್ರಮಗಳನ್ನು ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ನ ತರುಣರು ಹಮ್ಮಿಕೊಂಡಿದ್ದು, ಮಧ್ಯಾಹ್ನದಿಂದ ಸಂಜೆಯವರೆಗೆ ಫುಲ್ ಎಂಜಾಯ್ ಮಾಡಿದರು.
ಮಖ್ಯವಾಗಿ ಮಹಿಳೆಯರಿಗಾಗಿ ಲಿಂಬು ಚಮಚ, ಸೂಜಿದಾರ, ಹಗ್ಗಜಗ್ಗಾಟ, ಸಂಗೀತ ಕುಚರ್ಿ, ಮಡಿಕೆ ಒಡೆಯುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದ ಕೆಸರು ಗದ್ದೆಓಟ, ಕೆಸರು ಗದ್ದೆ ಮೂರು ಕಾಲಿನ ಓಟ, ಮಕ್ಕಳಿಗಾಗಿ ಬಲೂನ್ ಒಡೆತ ಕಾರ್ಯಕ್ರಮ ಬೊಂಬಾಟಾಗಿತ್ತು.
ಸಾವಿರಾರು ರೂ ಖಚರ್ು ಮಾಡಿ ಆಡಂಬರ ಮಾಡುವ ಕಾರ್ಯಕ್ರಮಗಳ ಮುಂದೆ ಮಳಲಿಯಲ್ಲಿ ಮಾಡಿದ ಕಾರ್ಯಕ್ರಮ ಭಿನ್ನವಾಗಿತ್ತು




















