ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸುತ್ತುಪೌಳಿಯ ಪ್ರಧಾನ ದಾರಂಧದ ಮೂಹೂರ್ತವು ಫೆ.7 ರಂದು ಬುಧವಾರ ಬೆಳಗ್ಗೆ ನೆರವೇರಿತು.
ದೇವಳದ ಅರ್ಚಕರು ಪೂಜೆ ನೆರವೇರಿಸಿದ ಬಳಿಕ ಕ್ಷೇತ್ರದ ತಂತ್ರಗಳಾದ ಸುಬ್ರಹಣ್ಯ ತಂತ್ರಿಯವರ ಮಾರ್ಗದರ್ಶನದಲ್ಲಿ ಕಲ್ಲಿನ ಶಿಲ್ಪಿ ಕೃಷ್ಣ ಕಾರ್ಕಳ ಅವರು ದಾರಂಧ ಇಡಲಾಯಿತು. ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ.ರಾಮ ಭಟ್, ಪರಮೇಶ್ವರ ಭಟ್, ಪದ್ಮಾನಾಭ ಭಟ್, ಮಾಧವ ಮಯ್ಯ, ದೇವಳದಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಕೃಷ್ಣರಾಜ ಮಾರ್ಲ, ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆ ಗುತ್ತು,ಗಿರಿಧರ ಶೆಟ್ಟಿ, ವಿದ್ಯಾಚರಣ್ ಭಂಡಾರಿ, ಸುಬ್ರಾಯ ಕಾರಂತ ಮತ್ತಿತರರು ಇದ್ದರು.
